Published
3 hours agoon
By
Akkare News



ರಸ್ತೆ ಅಭಿವೃದ್ದಿಗೆ 25 ಕೋಟಿ
ಈ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿಸಲು ಈಗಾಗಲೇ 25 ಕೋಟಿ ಅನುದಾನ ಮಂಜೂರಾಗಿದೆ. ರಸ್ತೆ ಅಭಿವೃದ್ದಿಯಾಗುವಲ್ಲಿ ಅಗಲ ಕಿರಿದಾದ ರಸ್ತೆಯನ್ನು ಮೊದಲು ಅಭಿವೃದ್ದಿ ಮಾಡಬೇಕಿದೆ ಎಂಬ ಉದ್ದೇಶದಿಂದ ಶಾಸಕರು ಇತ್ತೀಚೆಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಪುತ್ತೂರಿಗೆ ಬಂದಾಗ ರಸ್ತೆ ಮತ್ತು ಸೇತುವೆ ವೀಕ್ಷಣೆ ಮಾಡಿದ್ದರು. ರಸ್ತೆ ವೀಕ್ಷಣೆ ಮಾಡಿದ್ದ ಸಚಿವರು ಅನುದಾನದ ಭರವಸೆಯನ್ನು ನೀಡಿದ್ದರು.
5 ನಿಮಿಷದಲ್ಲಿ ಕಬಕದಿಂದ ವಿಟ್ಲಕ್ಕೆ
ಈ ರಸ್ತೆ ಚತುಷ್ಪಥವಾಗಿ ಅಭಿವೃದ್ದಿ ಹೊಂದಿದ ಬಳಿಕ ಕಬಕದಿಂದ ವಿಟ್ಲಕ್ಕೆ ಕೇವಲ 5 ನಿಮಿಷದಲ್ಲಿ ಕ್ರಯಿಸಲಿದೆ ಎಂಬ ಲೆಕ್ಕಾಚಾರವೂ ಇದೆ. ಅಗಲೀಕರಣದ ವೇಳೆ ಎಲ್ಲಾ ತಿರುವುಗಳು ತೆರವಾಗಲಿದೆ. ಸೇತುವೆಗಳು ಕೂಡಾ ಅಭಿವೃದ್ದಿ ಹೊಂದಲಿರುವ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯೂ ಇದೆ.



