ಪುತ್ತೂರು: 2025-26 ಶೈಕ್ಷಣಿಕ ವರ್ಷದಲ್ಲಿ ನಡೆದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ನರಿಮೊಗರು ಸಾಂದೀಪನಿ ವಿದ್ಯಾ ಸಂಸ್ಥೆಯ ತನ್ಮಯಿ .ಎಸ್ .ಆರ್ (ಶ್ರೀ ರಘುನಾಥ ಶೆಟ್ಟಿ ಬಿ. ಎಸ್ ಮತ್ತು ಶ್ರೀಮತಿ ತಾರಾ ಬಿ.ಸಿ, ಶೆಟ್ಟಿಮಜಲು ದಂಪತಿಗಳ ಪುತ್ರಿ )ಇವರು ಮರು ಮೌಲ್ಯಮಾಪನದಲ್ಲಿ ಹೆಚ್ಚುವರಿ 625 ರಲ್ಲಿ 615 ಅಂಕಗಳನ್ನು ಪಡೆದುಕೊಂಡು ವಿದ್ಯಾ ಸಂಸ್ಥೆಗೆ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯದಲ್ಲಿ ಹತ್ತನೇ ಸ್ಥಾನವನ್ನು ಪಡೆದುಕೊಂಡು ವಿದ್ಯಾಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ಕೆ.ಕೃಷ್ಣಪ್ಪರವರು ಶ್ರೀದುರ್ಗಾ ಲೈಟಿಂಗ್ಸ್ ಸೌಂಡ್ಸ್ ಅನ್ನು ಕಳೆದ 48 ವರ್ಷಗಳಿಂದ ಮುನ್ನೆಡೆಸುತ್ತಾ ಬಂದಿದ್ದು ತಮ್ಮ ವೃತ್ತಿಯಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ ಚಂದ್ರಾವತಿ, ಪುತ್ರ ತಂದೆಯ ವೃತ್ತಿಯನ್ನು ಮುನ್ನಡೆಸುತ್ತಿರುವ ಪ್ರದೀಪ್ ಕೆ., ಸೊಸೆ ಮೋಶ್ಮಿ, ಓರ್ವ ಮೊಮ್ಮಗಳನ್ನು ಅಗಲಿದ್ದಾರೆ.