ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಅಭಿವೃದ್ಧಿ ಕಾರ್ಯಗಳು

“ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಶಾಸನ ಮಂಟಪ ಮಾಡುವ ಕುರಿತು; ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ”

Published

on

ಪುತ್ತೂರು: “ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾಸನಗಳನ್ನು ಸಂರಕ್ಷಿಸುವ ಹಾಗೂ ಶಾಸನ ಮಂಟಪ ಮಾಡುವ ಕುರಿತು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮನವಿ” ದೇವಸ್ಥಾನದ ಹೊರಪ್ರಾಂಗಣದಲ್ಲಿ ನಿರ್ಲಕ್ಷಕ್ಕೆ ಒಳಗಾಗಿ ಇರುವ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶಾಸನ ಮಂಟಪ ಒಂದನ್ನು ನಿರ್ಮಿಸಿ ಅವುಗಳನ್ನು ಸಂರಕ್ಷಣೆ ಮಾಡುವ ಕುರಿತು ವಿನಂತಿ ಪತ್ರವನ್ನು ದೇವಳದ ಆಡಳಿತ ಅಧಿಕಾರಿಯಾದ ಶ್ರೀ ನವೀನ್ ಬಂಡಾರಿ ಅವರಿಗೆ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ಅವರು ನೀಡಿದರು.

ಪತ್ರದಲ್ಲಿ, ಸದರಿ ಶಾಸನಗಳು ಸುಮಾರು 12ನೇ ಶತಮಾನಕ್ಕೆ ಸೇರಿದ ಪ್ರಾಚೀನ ಕನ್ನಡ ಶಾಸನಗಳಾಗಿವೆ. ಸದರಿ ಶಾಸನಗಳಿಂದಾಗಿ 12ನೇ ಶತಮಾನದಲ್ಲಿ ಪ್ರಚಲಿತದಲ್ಲಿ ಇದ್ದ ಕನ್ನಡ ಭಾಷೆ, ಲಿಪಿ,ರಾಜಾಡಳಿತ, ಆಚಾರ -ವಿಚಾರ, ಸಂಪ್ರದಾಯ ಸಂಸ್ಕೃತಿ, ಧಾರ್ಮಿಕ ಆಚರಣೆಗಳು ಹಾಗೂ ಇನ್ನಿತರ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುವ ಈ ಶಾಸನ ಗಳಿಗೆ ಶಾಸನ ಮಂಟಪ ನಿರ್ಮಿತವಾದರೆ ರಾಜ್ಯದ ಮಾತ್ರವಲ್ಲದೆ ಹಾಗೂ ದೇಶ ವಿದೇಶಗಳ ನಾನಾ ಭಾಗಗಳಿಂದ ಇತಿಹಾಸ ಅಧ್ಯಯನ ಮಾಡುವ ಅಧ್ಯಯನಕಾರರು ಇಲ್ಲಿಗೆ ಆಗಮಿಸುತ್ತಾರೆ.





ಜೊತೆಗೆ ಸುತ್ತಮುತ್ತಲಿನ ಊರುಗಳಿಂದ ವಿದ್ಯಾರ್ಥಿಗಳು ಈ ಶಾಸನ ಮಂಟಪವನ್ನು ನೋಡಲು ತಂಡೋಪ ತಂಡವಾಗಿ ಬರಲಿದ್ದಾರೆ. ಇದರಿಂದಾಗಿ ಪುರಾತನ ಶಾಸನಗಳನ್ನು ಸಂರಕ್ಷಣೆ ಮಾಡಿದ ಸಾರ್ಥಕತೆ ಒಂದೆಡೆಯಾದರೆ ಪ್ರವಾಸೋದ್ಯಮವೂ ಬೆಳೆಯಲಿದೆ. ಇದು ಶಾಸನ ಮಂಟಪದ ಫಲ ಶ್ರುತಿ ಯಾಗಿದೆ ಎಂದು ಉಲ್ಲೇಖಿಸಲಾಗಿದೆ.
ಭವ್ಯ ಭಾರತದ ಜ್ಞಾನ ನಿಧಿ ಈ ಪುರಾತನ ಶಾಸನ ಸಂರಕ್ಷಣೆಗಾಗಿ ಶಾಸನ ಮಂಟಪವನ್ನು ರಚಿಸಲು ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಅವಕಾಶ ನೀಡಬೇಕಾಗಿ ವಿನಂತಿಸಲಾಗಿದೆ,ಇಲ್ಲವಾದಲ್ಲಿ ಸದ್ರಿ ಯೋಜನೆಯನ್ನು ದೇವಳದ ಕ್ರಿಯಾಯೋಜನೆಯಲ್ಲಿ ಅಳವಡಿಸಬೇಕಾಗಿ ವಿನಂತಿಸಲಾಗಿದೆ

Continue Reading
Click to comment

Leave a Reply

Your email address will not be published. Required fields are marked *

Advertisement