Published
2 years agoon
By
Akkare News
ಪುತ್ತೂರು : ಶಾಸಕರ ಕಚೇರಿಯಲ್ಲಿ ಬರ ಪರಿಹಾರ ಸಭೆಯಲ್ಲಿ ಶಾಸಕರು ಸಾರ್ವಜನಿಕರ ದೂರಿನ ಮೇರೆಗೆ ನಗರಸಭೆ ವ್ಯಾಪ್ತಿಯ ರಸ್ತೆಯಲ್ಲಿ ಗುಂಡಿ ಬಿದ್ದು ವಾಹನಗಳಿಗೆ ಹೋಗಲು ತೊಂದರೆಯಾದ ವಿಷಯವನ್ನು
ಅಧಿಕಾರಿಗಳಿಗೆ ತಿಳಿಸಿದಾಗ ಅಧಿಕಾರಿಗಳು ಎಚ್ಚೆತ್ತುಕೊಂಡು ದರ್ಬೆ ಸರ್ಕಲ್ ಬಳಿಯಲ್ಲಿ ಇಂಟರ್ಲಾಕ್ ಹಾಕಿ ದುರಸ್ತಿಗೊಳಿಸಿರುತ್ತಾರೆ. ಮಳೆ ಕಡಿಮೆಯಾದ ಕೂಡಲೇ ಉಳಿದ ಗುಂಡಿ ಮುಚ್ಚಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರು ಶಾಸಕರಿಗೆ ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
‘