Published
2 hours agoon
By
Akkare News


ಈ ಹಿನ್ನಲೆಯಲ್ಲಿ ಪುತ್ತೂರು ನಗರಕ್ಕೆ ಹೊಸದಾಗಿ ಬಾಲಕಕರ ವಸತಿ ನಿಲಯವನ್ನು ಮಂಜೂರುಗೊಳಿಸುವುದು ಅತ್ಯಂತ ಅಗತ್ಯವಾಗಿದೆ. ಇನ್ನು ವಿಶೇಷವಾಗಿ ಪುತ್ತೂರು ನಗರದಲ್ಲಿ ಈಗಾಗಲೇ ನಿರ್ಮಾಣಗೊಂಡು ಪ್ರಸ್ತುತ ಖಾಲಿಯಾಗಿ ಇರುವ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡವನ್ನು ಬಳಸಿ ಬಾಲಕರ ವಸತಿ ನಿಲಯ ನಿರ್ಮಾಣಗೊಂಡರೆ ಸರಕಾರಕ್ಕೆ ಹೆಚ್ಚುವರಿ ವೆಚ್ಚ ಕಡಿಮೆಯಾಗುವುದರ ಜೊತೆಗೆ ಸಾರ್ವಜನಿಕ ಅಸ್ತಿ ಸದುಪಯೋಗ ಆಗಲಿದೆ. ಆದುದರಿಂದ ಪರಿಶೀಲಿಸಿ ಪುತ್ತೂರು ತಾಲೂಕಿಗೆ ಅಲ್ಪ ಸಂಖ್ಯಾತ ಬಾಲಕರ ವಸತಿ ನಿಲಯ ಮಂಜೂರು ಮಾಡುವಂತೆ ಹಾಗೂ ಈಗಾಗಲೇ ನಿರ್ಮಾಣಗೊಂಡು ಖಾಲಿ ಇರುವ ಕಾಮನ್ ಸರ್ವಿಸ್ ಸೆಂಟರ್ ಕಟ್ಟಡದಲ್ಲಿ ವಸತಿ ನಿಲಯ ಪ್ರಾರಂಭಿಸುವಂತೆ ರಾಜ್ಯದ ವಸತಿ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖಾ ಸಚಿವರಾದ ಮಾನ್ಯ ಝಮೀರ್ ಅಹ್ಮದ್ ಖಾನ್ ರವರಿಗೆ ಶಾಸಕ ಅಶೋಕ್ ಕುಮಾರ್ ರೈ ಯವರು ಲಿಖಿತ ಮನವಿ ಸಲ್ಲಿಸಿದ್ದು. ಸಚಿವರು ಶಾಸಕರ ಮನವಿಯಂತೆ ವಸತಿ ನಿಲಯ ಪ್ರಾರಂಭಿಸಲು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮನವಿ ಕೊಡುವ ಸಂದರ್ಭದಲ್ಲಿ ಶಾಸಕರೊಂದಿಗೆ ಕಾಂಗ್ರೆಸ್ ಪ್ರಚಾರ ಸಮಿತಿ ದ ಕ ಜಿಲ್ಲಾಧ್ಯಕ್ಷ ಎಚ್. ಮಹಮ್ಮದ್ ಅಲಿ. ಕಾಂಗ್ರೆಸ್ ಮುಖಂಡ ರೋಷನ್ ರೈ ಬನ್ನೂರು ಉಪಸ್ಥಿತರಿದ್ದರು.



