Published
12 hours agoon
By
Akkare News
ಮುಂಡೂರಿನಲ್ಲಿ ಕೆಲವೇ ದಿನಗಳಲ್ಲಿ ಬರಲಿರುವ ಅಂದಾಜು 10 ಕೋಟಿ ರೂ. ವೆಚ್ಚದ ಹೈಟೆಕ್ ಡಿಜಿಟಲ್ RTO ಟ್ರ್ಯಾಕ್, ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್ ಚಾರ್ಚಿಂಗ್ ಪಾಯಿಂಟ್ ಹಾಗೂ ಕ್ರೀಡಾಂಗಣಕ್ಕೆ ಬರುವ ಜನರಿಗೆ ಹಾಗೂ ಸ್ಥಳೀಯ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ಸಂಚಾರ ದಟ್ಟಣೆಯ ಸಮಸ್ಯೆ ಕಾಡಬಾರದು ಎಂಬ ದೂರದೃಷ್ಟಿಯಿಂದ, ಶಾಸಕರು ಮುಕ್ರಂಪಾಡಿಯಿಂದ_ಮುಂಡೂರು ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿಗೆ ಬರೋಬ್ಬರಿ 4 ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಘೋಷಿಸಿದ್ದಾರೆ.
ಕೇವಲ ಭಾಷಣಗಳಲ್ಲದೆ, ಪ್ರತಿಯೊಂದು ಮಾತನ್ನೂ ಕೃತಿಯಲ್ಲಿ ತೋರಿಸುತ್ತಾ ಪುತ್ತೂರು ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ರೂಢಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ಈ ಜನಪರ ಕಾಳಜಿ ಹಾಗೂ ಅಭಿವೃದ್ಧಿ ಪರ ಹೋರಾಟಕ್ಕೆ ಮುಂಡೂರು ಭಾಗದ ಜನತೆ ಹರ್ಷೋದ್ಘಾರ ವ್ಯಕ್ತಪಡಿಸಿದ್ದು, ಕ್ಷೇತ್ರದ ಪ್ರತಿಯೊಬ್ಬರ ಹೃದಯದಲ್ಲೂ ಅಶೋಕ್ ಕುಮಾರ್ ರೈ ಅವರ ನಾಯಕತ್ವ ಮತ್ತಷ್ಟು ಗಟ್ಟಿಯಾಗಿದೆ!



