Published
3 hours agoon
By
Akkare News
ಪುತ್ತೂರು: ಶಂಸುಲ್ ಉಲಮಾ ಎಜುಕೇಷನ್ ಸೆಂಟರ್ ಹಾಗೂ ಜಿಸ್ತಿಯಾ ಮದ್ರಸ ಆಡಳಿತ ಸಮಿತಿ ತಿಂಗಳಾಡಿ ಇದರ ವಾರ್ಷಿಕ ಮಹಾಸಭೆ ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಸಂತೋಷ್ ಅವರ ಅದ್ಯಕ್ಷತೆಯಲ್ಲಿ ನಡೆಯಿತು.

ಸಮಿತಿಯ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ ವರದಿ ಮಂಡಿಸಿದರು. ನಂತರ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಅದ್ಯಕ್ಷರಾಗಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಉಪಾದ್ಯಕ್ಷರಾಗಿ ಅಬ್ದುಲ್ಲ ಪಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಹಮೀದ್ ದರ್ಬೆ, ಕೋಶಾಧಿಕಾರಿಯಾಗಿ ಮಹಮ್ಮದ್ ಕುಂಞಿ (ಅಮ್ಮಿ) ಪಟ್ಟೆ, ಕಾರ್ಯದರ್ಶಿಯಾಗಿ ಲತೀಫ್ ಆದ್ರೋಡಿ ಆಯ್ಕೆಗೊಂಡರು. ಆಡಳಿತ ಸಮಿತಿ ಸದಸ್ಯರಾದ ಇಬ್ರಾಹಿಂ ಹಾಜಿ ದರ್ಬೆ, ಲತೀಫ್ ಅಂಙತ್ತಡ್ಕ, ಸಯೀದ್ ಬೇರಿಕೆ, ಹಾರಿಸ್ ತೋಟ, ರಝಾಕ್ ದರ್ಬೆ, ಶಕೀಲ್ ಬೇರಿಕೆ, ಹಾರಿಸ್ ಬೋಳೋಡಿ ಆಯ್ಕೆಯಾದರು.

‘





