Connect with us

ಆರೋಗ್ಯ

ಮಂಗಳೂರಿನಲ್ಲಿ ಡಿಎಚ್‌ಒ ನೇತೃತ್ವದ ತನಿಖಾ ತಂಡದ ಸಭೆ : ಇಂದು ವರದಿ ಅಂತಿಮ

Published

on

ಪುತ್ತೂರು ::ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್‌ ಹೆರಿಗೆ ನಡೆಸಿದ ಬಳಿಕ ವೈದ್ಯರು ಬ್ಯಾಂಡೇಜಿನ ಬಟ್ಟೆಯ ತುಂಡನ್ನು ಗರ್ಭಿಣಿ ಮಹಿಳೆಯ ಉದರದಲ್ಲೇ ಬಿಟ್ಟು ಹೊಲಿಗೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಡಿಎಚ್‌ಒ ನೇತೃತ್ವದ ತನಿಖಾ ತಂಡದ ಸಭೆ ಮಂಗಳೂರಿನಲ್ಲಿ ನಡೆದಿದೆ.
ಪ್ರಕರಣದ ತನಿಖೆಗಾಗಿ ರಚಿಸಲಾದ ಆರು ಮಂದಿ ಅಧಿಕಾರಿಗಳು ಮತ್ತು ವೈದ್ಯರ ತಂಡವು ಪುತ್ತೂರಿನಲ್ಲಿ ವಿಚಾರಣೆ, ಪರಿಶೀಲನೆ ನಡೆಸಿದ ಬಳಿಕ ಮಂಗಳೂರಿನಲ್ಲಿ ಸಭೆ ನಡೆಸಿ ವಿಸ್ತೃತ ವರದಿ ಸಿದ್ಧಪಡಿಸುವ ಬಗ್ಗೆ ಚರ್ಚೆ ನಡೆಸಿತು.

ಹೇಳಿಕೆ ದಾಖಲು
ಘಟನೆ ನಡೆದ ಪುತ್ತೂರಿನ ಆಸ್ಪತ್ರೆ ಹಾಗೂ ದೂರುದಾರರ ನಿವಾಸಕ್ಕೆ ಸೋಮವಾರ ತೆರಳಿ ಮಾಹಿತಿ ಕಲೆ ಹಾಕಿದ್ದ ತನಿಖಾ ತಂಡ, ಅಂದು ವಿಚಾರಣೆಗೆ ಸಿಗದವರನ್ನು ಮಂಗಳೂರಿಗೆ ಕರೆಸಿ ಅವರ ಹೇಳಿಕೆ ಪಡೆಯಿತು.

 

ವರದಿ ತಯಾರಿ
ಪ್ರಕರಣಕ್ಕೆ ಸಂಬಂಧಿಸಿ ಎರಡು ದಿನಗಳ ವಿಚಾರಣೆ ಪೂರ್ಣಗೊಂಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್‌ ಗುಂಡೂರಾವ್‌ ಅವರು ತತ್‌ಕ್ಷಣ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಗುರುವಾರ ವರದಿ ಅಂತಿಮಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಕಳುಹಿಸಲಾಗುವುದು ಎಂದು ಡಿಎಚ್‌ಒ ಡಾ| ತಿಮ್ಮಯ್ಯ ತಿಳಿಸಿದ್ದಾರೆ.

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version