Connect with us

ರಾಜಕೀಯ

ಪದ್ಮರಾಜ್‌ ಆರ್ ಪೂಜಾರಿಯವರು ಎಂ ಪಿ ಆಗಿಯೇ ಆಗ್ತಾರೆ: ಶಾಸಕ ಅಶೋಕ್ ರೈ

Published

on

ಪುತ್ತೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪದ್ಮರಾಜ್ ಆರ್ ಪೂಜಾರಿಯವರು ಚುನಾವಣೆಯಲ್ಲಿ ಸೋತಿರಬಹುದು ಆದರೆ ಜನರ ನಡುವೆ ಅವರ ಪ್ರೀತಿಯ ಒಡನಾಟ ಮುಙದುವರೆದಿದ್ದು ಮುಂದೆ ಅವರು ಎಂ ಪಿ ಆಗಿಯೇ ಆಗುತ್ತಾರೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದರು.

ಅವರು ಪಮ್ಮಲೆ ಉರೂಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ‌ಮಾತನಾಡಿದರು. ಚುನಾವಣೆಯಲ್ಲಿ ಸೋಲಾಗಿದೆ ಎಂದು ಪದ್ಮರಾಜರು‌ಮನೆಯಲ್ಲಿ ಕೂರಲಿಲ್ಲ, ಇಡೀ ಕ್ಷೇತ್ರದಲ್ಲಿ ನಿರಂತರ ಓಡಾಟ ಮಾಡುತ್ತಿದ್ದಾರೆ. ಜಾತಿ,ಮತ, ಧರ್ಮಗಳ ಬೇಧವಿಲ್ಲದೆ ಎಲ್ಲರನ್ನೂ ಪ್ರೀತಿಸುವ ಅವರ ಮನಸ್ಸು ನಿಜಕ್ಕೂ ಅಭಿನಂದನಾರ್ಹ.‌ಅವರ ಮುಂದಿನ ರಾಜಕೀಯ ಜೀವನ ಉಜ್ವಲವಾಗುವ ಕಾಲ ಬಂದೇ ಬರುತ್ತದೆ ಎಂದು ಅಶೋಕ್ ರೈ ಹೇಳಿದರು.

 

 

ವೇದಿಕೆಯಲ್ಲಿ‌ ಪಮ್ಮಲೆ ಜಮಾತ್ ಅಧ್ಯಕ್ಷ‌ಮಹಮ್ಮದ್ ಬಡಗನ್ನೂರು, ಪುಡಾ‌ಸದಸ್ಯ ನಿಹಾಲ್ ಪಿ ಶೆಟ್ಟಿ, ಉದ್ಯಮಿ ರಂಜಿತ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version