Published
3 weeks agoon
By
Akkare News
ಬಿಳಿಯೂರು ಗ್ರಾಮದ-ಕೋಡ್ಲೆ ಮಾಡುತ್ತಾರು ರಸ್ತೆಯ ಕಾಂಕ್ರೀಟೀಕರಣ ಮತ್ತು ಸೇತುವೆಗೆ ಒಟ್ಟು ಇಪ್ಪತ್ತೈದು ಲಕ್ಷ ರೂಪಾಯಿಗಳ ಅನುದಾನದ ಕಾಮಗಾರಿಗೆ ಶಾಸಕರಾದ ಶ್ರೀ ಅಶೋಕ್ ಕುಮಾರ್ ರೈ ಯವರು ಶೀಲಾನ್ಯಾಸ ನಡೆಸಿದರು.ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖoಡರಾದ ಗಣೇಶ್ ರಾಜ್, ಮ್ಯಾಕ್ಸಿಮ್ ಲೋಬೋ, ತನಿಯಪ್ಪ ಪೂಜಾರಿ, ಜಯಂತ ಪೂಜಾರಿ, ಫಾರೂಕ್ ಪೆರ್ನೆ, ನಳಿಲಿ ಹಾಗೂ ಈ ರಸ್ತೆಯ ಎಲ್ಲಾ ಫಲಾನುಭವಿ ಗ್ರಾಮಸ್ಥರು ಅಲ್ಲದೆ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾದ ತೌಸೀಫ್ ಯು.ಟಿ, ಪುತ್ತೂರು ವಿಧಾನ ಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷರಾದ ಡಾ. ರಾಜರಾಮ್ ಕೆ.ಬಿ, ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಉಮಾನಾಥ್ ಶೆಟ್ಟಿ ಮುಂತಾದವರು ಹಾಜರಿದ್ದರು.








