Published
7 days agoon
By
Akkare News
ರಾಜ್ಯದಲ್ಲಿಯೇ ಸರಳ ಹಾಗೂ ಸಜ್ಜನ ರಾಜಕಾರಣಿ, ಜನರ ನೆಚ್ಚಿನ ಶಾಸಕ ಎಂದು ಗುರುತಿಸಿಕೊಂಡಿರುವ ಬಿಜೆಪಿಯ ಎಂಎಲ್ಎ ಸುರೇಶ್ ಕುಮಾರ್ ಅವರು ಬೆಳ್ಳಂ ಬೆಳಗ್ಗೆ 7 ಗಂಟೆಗೆ ಎದ್ದು ಸೀದಾ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪ್ರವೀಣ್ ಬಾರ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ವಿಚಾರ ಇದೀಗ ಬಾರಿ ಚರ್ಚೆಯಾಗುತ್ತಿದೆ.
ಹೌದು ಕಣ್ರೀ, ಶಾಸಕ ಸುರೇಶ್ ಕುಮಾರ್ ಅವರು ಬೆಳಗ್ಗೆ 7 ಗಂಟೆಗೆ ಎದ್ದು ಬಾರ್ ಒಂದಕ್ಕೆ ದೌಡಾಯಿಸಿದ್ದಾರೆ. ಹಾಗಂತ ಅವರು ಬೆಳ್ಳಂಬೆಳಗ್ಗೆಯೇ ತೀರ್ಥ ಸೇವನೆಗೆ ಬಂದದ್ದು ಎಂದು ಭಾವಿಸಬೇಡಿ. ಅಥವಾ ಇಂತಹ ರಾಜಕಾರಣಿ ಈ ರೀತಿ ಮಾಡುತ್ತಾರಾ ಎಂದು ತಿಳಿಯಲೂ ಬೇಡಿ. ಯಾಕೆಂದರೆ ಅವರು ಬಾರಿಗೆ ಬಂದದ್ದಂತೂ ನಿಜ. ಆದರೆ ಬಂದ ಕಾರಣ ಮಾತ್ರ ಬೇರೆ. ಅದೇನೆಂದರೆ ರಾಜಾಜಿನಗರದ ಪ್ರವೀಣ್ ಬಾರ್ ನಲ್ಲಿ ನಿಯಮ ಒಂದರ ಉಲ್ಲಂಘನೆಯಾಗಿದೆ. ಹೀಗಾಗಿ ಬಾರ್ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗಿ ಅವರು ಅಷ್ಟು ಬೇಗ ಎದ್ದು ಬಾರ್ ಕಡೆ ಮುಖ ಮಾಡಿದ್ದಾರೆ.
ಕಳೆದ ಫೆಬ್ರವರಿಯಲ್ಲಿಯೂ ಈ ಬಾರ್ ನಿಯಮ ಮೀರಿ ಮುಂಜಾನೆಯೇ ತೆರೆದಿತ್ತು. ಅಂದು ಕೂಡ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಎಚ್ಚರಿಕೆ ನೀಡಿದ್ದರು. ಆದರೂ ಮಾಲೀಕರು ತಮ್ಮ ಚಾಳಿಯನ್ನು ಮುಂದುವರಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ವಸತಿ ಪ್ರದೇಶಗಳಲ್ಲಿ ಈ ರೀತಿ ಅಕ್ರಮವಾಗಿ ಸಮಯಕ್ಕಿಂತ ಮುಂಚೆ ಮದ್ಯ ಮಾರಾಟ ಮಾಡುವುದರಿಂದ ಸ್ಥಳೀಯ ನಿವಾಸಿಗಳಿಗೆ ಹಾಗೂ ವಾಯುವಿಹಾರಿಗಳಿಗೆ ಅತೀವ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಇನ್ನೂ ಈ ಕುರಿತು ಗಂಭೀರವಾಗಿ ಪ್ರತಿಕ್ರಿಯಿಸಿರುವ ಸುರೇಶ್ ಕುಮಾರ್ ಅವರು, ಅಬಕಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.