Published
13 hours agoon
By
Akkare News

ನಿರಂತರ ಮಳೆಯಿಂದ ಮಹಾರಾಷ್ಟ್ರದಲ್ಲಿ ಭಾರೀ ಅನಾಹುತಗಳು ಸಂಭವಿಸಿದೆ. ಆದರೆ ಮಳೆಯಿಂದ ಇಷ್ಟು ದೊಡ್ಡ ಎಕ್ಸ್ಪ್ರೆಸ್ವೇಯ ಸುರಂಗ ಮಾರ್ಗಕ್ಕೆ ಹಾನಿಯಾಗಿರುವುದು ಕಳಪೆ ಕಾಮಗಾರಿಯ ಕಾರಣವೇ ಎನ್ನುವ ಪ್ರಶ್ನೆ ಮೂಡಿಸಿದೆ. ಬೀದಿಗಳಲ್ಲಿ ಮಳೆ ನೀರು ನದಿಗಳಾಗಿ ಬದಲಾಗಿವೆ. ಕಾರಿಡಾರ್ ಸುಮಾರು 18 ಗಂಟೆಗಳ ಕಾಲ ಮುಚ್ಚಲ್ಪಟ್ಟಿತ್ತು. ಇದರಿಂದಾಗಿ ಹಳೆಯ ಮುಂಬೈ-ಪುಣೆ ಹೆದ್ದಾರಿಯಲ್ಲಿ ಸಂಚಾರ ಮತ್ತೆ ಆರಂಭವಾಯಿತು ಮತ್ತು ಸಾವಿರಾರು ಪ್ರಯಾಣಿಕರ ಜೀವನವು ಸಂಪೂರ್ಣ ಅಸ್ತವ್ಯಸ್ತವಾಯಿತು ಎಂದು ವರದಿಯಾಗಿದೆ. ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ (MSRDC)ವು ಭಾರೀ ಮಳೆಯಿಂದ ಈ ಹಾನಿ ಸಂಭವಿಸಿದೆ ಎಂದು ಹೇಳಿದರೂ, ಸುರಂಗ ಮಾರ್ಗ ಮತ್ತು ಭೂತಾಂತ್ರಿಕ ತಜ್ಞರು ಮಳೆ ಅಸಾಮಾನ್ಯವಾಗಿದ್ದರೂ, ಕಾಮಗಾರಿ ವೇಳೆಗೆ ಕೆಲವೊಂದು ಕ್ರಮಗಳನ್ನು ಅನುಸರಿಸಿದ್ದರೆ ಈ ದುರಂತವನ್ನು ತಪ್ಪಿಸಬಹುದಿತ್ತು ಎಂದು ಹೇಳಿದ್ದಾರೆ.
ಮುಂಬೈನಲ್ಲಿ ಸಂಭವಿಸಿದ ದುರಂತವೇನು
ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯ ಮಿಸ್ಸಿಂಗ್ ಲಿಂಕ್ನಲ್ಲಿ ಸುರಂಗ 2ರ ನಿರ್ಗಮನದ ಬಳಿ ಭೂಕುಸಿತ ಸಂಭವಿಸಿದ ನಂತರ ಸಂಚಾರ ಅಸ್ತವ್ಯಸ್ತವಾಗಿತ್ತು. ಭಾರೀ ಮಳೆಯು ಸುರಂಗದ ಸುತ್ತಲಿನ ಇಳಿಜಾರು ಭಾಗದಲ್ಲಿ ಹಾನಿಯನ್ನುಂಟು ಮಾಡಿದೆ. ಭಾರೀ ಮಳೆಯ ಕಾರಣಕ್ಕಾಗಿ ಈ ದುರಂತ ಸಂಭವಿಸಿದೆ ಎಂದು ಸರ್ಕಾರ ಹೇಳಿದೆಯಾದರೂ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಸುರಂಗ ದುರಂತದ ಬಗ್ಗೆ ಪ್ರಶ್ನೆ ಮಾಡಿರುವ ಬಗ್ಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಪಹಾಸ್ಯ ಮಾಡಿದ್ದು, ಅಸಭ್ಯ ಪದಗಳನ್ನು ಬಳಸಿ ಟೀಕೆ ಮಾಡಿದ್ದಾರೆ. 







