Published
1 hour agoon
By
Akkare News
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯವು (ಇಡಿ) ನಡೆಸಿದ ದಾಳಿಯನ್ನು ಮಾಜಿ ಸಂಸದ ಮತ್ತು ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, “ಸಾರ್ವಜನಿಕವಾಗಿ ಚಾರಿತ್ರ್ಯ ಹರಣ” ಎಂದು ಕರೆದಿದ್ದಾರೆ. ಇಂತಹ ಪದ್ಧತಿಯು ಬೇರೆ ಯಾವುದೇ ದೇಶದಲ್ಲಿ ನಡೆಯುವುದಿಲ್ಲ ಎಂದು ಅವರು ಹೇಳಿದ್ದಾರೆ. 
ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಲ್ಯ, “ಜಾರಿ ನಿರ್ದೇಶನಾಲಯವು ಇದರ ಬಗ್ಗೆ ಹೆಮ್ಮೆಪಡುತ್ತಿದೆ. ಯಾವುದೇ ಆರೋಪಪಟ್ಟಿ ಇಲ್ಲ. ವಿಚಾರಣೆಯೂ ಇಲ್ಲ. ಕೇವಲ ಸಾರ್ವಜನಿಕವಾಗಿ ಚಾರಿತ್ರ್ಯ ವಧೆ ಅಷ್ಟೇ. ಇದು ಬೇರೆ ಯಾವುದೇ ದೇಶದಲ್ಲಿ ಸಂಭವಿಸುವುದಿಲ್ಲ. ದಯವಿಟ್ಟು ನೀವೇ ಯೋಚಿಸಿ” ಎಂದು ಬರೆದುಕೊಂಡಿದ್ದಾರೆ.

ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಹೊಸದಾಗಿ ಪ್ರಾರಂಭಿಸಿದ, ಸ್ವಯಂ ಆರತಿಯು ಈ ಬಾರಿಯ 45ನೇ ಶ್ರೀ ಗಣೇಶೋತ್ಸವದಲ್ಲಿ ವಿಶೇಷವಾಗಿರುತ್ತದೆ. ಜೊತೆಗೆ ರಂಗಪೂಜೆ, ಸರ್ವಸೇವೆ, ಮಹಾಪೂಜೆ, ಗಣಪತಿ ಹವನ, ಹರಕೆ ಸೇವೆ, ಪಂಚಕಜ್ಜಾಯ, ವಿದ್ಯಾರಕ್ಷೆ, ಕರ್ಪೂರಾರತಿ ಸೇವೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.


