Connect with us

ಇತರ

ಶಾಸಕ ಅಶೋಕ್ ರೈ ಹುಟ್ಟುಹಬ್ಬ: ರೈ ಟ್ರಸ್ಟ್‌ನಿಂದ ವೀಲ್ ಚೆಯರ್ ವಿತರಣೆ ನಮಗಿಂತ ಕಳೆಗಿನವರನ್ನು ನೋಡಿದರೆ ನಮ್ಮ ಕಷ್ಟ ಕಷ್ಟವೇ ಅಲ್ಲ: ಅಶೋಕ್ ರೈ

Published

on

ಪುತ್ತೂರು; ಎಲ್ಲರಿಗೂ ಒಂದಲ್ಲ ಒಂದು ರೀತಿಯ ಕಷ್ಟ, ನೋವುಗಳು ಇದ್ದೇ ಇದೆ ಆದರಲ್ಲಿ ಕೆಲವರು ಯಾವುದನ್ನೂ ಇನ್ನೊಬ್ಬರಲ್ಲಿ ಹೇಳಿಕೊಳ್ಳದೆ ಸುಮ್ಮನೆ ಇರುತ್ತಾರೆ. ನಾವು ನಮಗಿಂತ ಕಳೆಗಿನವರ ಕಷ್ಟ, ನೋವನ್ನು ಅರಿತುಕೊಂಡಾಗ ನಮ್ಮ ಕಷ್ಟಗಳು ಕಷ್ಟಗಳೇ ಅಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದರು. ಅವರು ತಮ್ಮ ಹುಟ್ಟುಹಬ್ಬದ ಪ್ರಯುಕ್ತ ತಮ್ಮದೇ ರೈ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಡೆದ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಅಶಕ್ತರಿಗೆ ವೀಲ್ ಚೆಯರ್ ವಿತರಿಸಿ ಮಾತನಾಡಿದರು.
ಇನ್ನೊಬ್ಬರ ನೋವು ಅರಿಯದವನಿಗೆ ಅಹಂ ಬಂದು ಬಿಡುತ್ತದೆ, ಅಂಥವರನ್ನೊಮ್ಮೆ ನೊಂದವರ ಬಳಿ ಕರೆದುಕೊಂಡು ಹೋಗಬೇಕು ಆಗ ಅವನ ಅಹಂ ತನ್ನಿಂತಾನೆ ನಿಂತು ಬಿಡುತ್ತದೆ, ನಾವು ಬಡವರಿಗೆ ಸಹಾಯ ಮಾಡುವ ಮನಸ್ಸು ಉಳ್ಳವರಾಗಬೇಕು, ಅವರ ನೋವುಗಳನ್ನು ಅರಿತು ನೆರವು ನೀಡುವಂತಾಗಬೇಕು. ಪರಸ್ಪರ ಸಹಾಯ ಮಾಡುವ ಮನಸ್ಸು ನಮ್ಮಲ್ಲಿದ್ದರೆ ಜೀವನದಲ್ಲಿ ಸೋತವರಿಗೂ ಸಾಂತ್ವನ ನೀಡಬಹುದು ಎಂದು ಹೇಳಿದರು. ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಾಸಕರು ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಅಶಕ್ತರನ್ನು ಗುರುತಿಸಿ ಪ್ರತೀ ವರ್ಷ ವೀಲ್ ಚೆಯರ್ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಯಾರೂ ಕಷ್ಟದಿಂದ ಇರಬಾರದು ಎಂಬ ಧ್ಯೇಯದಿಂದ ಈ ಕಾರ್ಯ ಮಾಡುತ್ತಿದ್ದಾರೆ. ಮನೆಯಿಲ್ಲದ ಬಡವರಿಗೆ ನಿವೇಶನ ಕೊಡುವ ಯೋಜನೆಯ ಮೂಲಕ ಅವರಿಗೊಂದು ಸೂರು ಕಲ್ಪಿಸುವ ಯೋಜನೆಯ ಜೊತೆಗೆ ತೀರಾ ಸಂಕಷ್ಟದಲ್ಲಿರುವ ಕುಟುಂಬಕ್ಕೆ ನೆರವಾಗುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಮಾತನಾಡಿ ತನ್ನ ಹುಟ್ಟು ಹಬ್ಬದಂದು ಬಡವರಿಗೆ ನೆರವು ನೀಡುವ ಮೂಲಕ ಶಾಸಕರು ಮಾನವೀಯ ಗುಣವನ್ನು ಮೈಗೂಡಿಸಿಕೊಂಡಿರುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಹೇಳಿದರು. ಅಕ್ರಮ ಸಕ್ರಮ ಸಮಿತಿ ಸದಸ್ಯರಾದ ಮಹಮ್ಮದ್ ಬಡಗನ್ನೂರು ಮಾತನಾಡಿ ಶಾಸಕರು ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾರೆ. ಬಡವರ ನೋವಿಗೆ ಸ್ಪಂದಿಸುವುದು ಅವರ ದೊಡ್ಡ ಗುಣವಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಕೃಷ್ಣಪ್ರಸಾದ್ ಆಳ್ವ, ಪದ್ಮನಾಭ ಪೂಜಾರಿ ಸಣ್ಣಗುತ್ತು, ನಿಹಾಲ್ ಪಿ ಶೆಟ್ಟಿ, ಜಯಪ್ರಕಾಶ್ ಬದಿನಾರ್, ರಿತೇಶ್ ಶೆಟ್ಟಿ ಕೌಡಿಚ್ಚಾರ್ ಉಪಸ್ಥಿತರಿದ್ದರು. ರೈ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಸ್ವಾಗತಿಸಿದರು. ರಾಮಣ್ಣ ಪಿಲಿಂಜ ಕಾರ್ಯಕ್ರಮ ನಿರ್ವಹಿಸಿದರು. ಶಾಸಕ ಅಶೋಕ್ ರೈ ಅವರ ಹುಟ್ಟು ಹಬ್ಬದಂದು ಅವರ ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮೂಲಕ ೫ ಮಂದಿ ಅಶಕ್ತರಿಗೆ ವೀಲ್ ಚೆಯರ್ ವಿತರಣೆ ಮಾಡಿದ್ದೇವೆ. ತಾಲೂಕಿನನೈಜ ಅಶಕ್ತರನ್ನು ಗುರುತಿಸಿ ಅವರಿಗೆ ವೀಲ್ ಚೆಯರ್ ವಿತರಣೆ ಮಾಡಿದ್ದೇವೆ. ಕಳೆದ ಹಲವು ವರ್ಷಗಳಿಂದ ನಾವು ಈ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ,ನೊಂದವರಿಗೆ ಸಾಂತ್ವನ ನೀಡುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಆಚರಣೆ ಮಾಡುತ್ತಿದ್ದೇವೆ. ಸುದೇಶ್ ಶೆಟ್ಟಿ, ಟ್ರಸ್ಟ್ ಕಾರ್ಯಾಧ್ಯಕ್ಷರು

 

Continue Reading
Click to comment

Leave a Reply

Your email address will not be published. Required fields are marked *

Advertisement