Published
3 hours agoon
By
Akkare News
ಮುರುಳ್ಯದ ಕಡೀರದಲ್ಲಿ ನಡೆದ ದುರ್ಘಟನೆ ಮುರುಳ್ಯ ಗ್ರಾಮದ ಕಡೀರ ಎಂಬಲ್ಲಿ ಮನೆಯ ಸಮೀಪದ ಕೆರೆಗೆ ಬಿದ್ದು ಅವಳಿ ಮಕ್ಕಳು ಮೃತಪಟ್ಟ ದಾರುಣ ಘಟನೆ ಇಂದು ಸಂಜೆ ನಡೆದಿದೆ ವಸಂತ ಎಂಬವರ ಮಕ್ಕಳಾದ ಜಶ್ವಿನ್ ಹಾಗೂ ಜಸ್ವಿತ್ (ಐದೂವರೆ ವರ್ಷ ) ಮೃತರು ಕಡೀರ ನಿವಾಸಿ, ವೆಲ್ಡಿಂಗ್ ಕೆಲಸ ಮಾಡುವ ವಸಂತ ಎಂಬವರ ಮಕ್ಕಳಾದ ಜಶ್ವಿನ್ ಹಾಗೂ ಜಸ್ವಿತ್ (ಐದೂವರೆ ವರ್ಷ ) ಮೃತರು ಸಂಜೆ ಆಟವಾಡುತ್ತಿದ್ದಾಗ ಮನೆಯ ಸಮೀಪವೇ ಇದ್ದ ಕೆರೆಗೆ ಆಕಸ್ಮಿಕವಾಗಿ ಬಿದ್ದರೆಂದು ತಿಳಿದು ಬಂದಿದೆ. ಸುಳ್ಯದಿಂದ ಅಗ್ನಿ ಶಾಮಕದಳದ ಅಧಿಕಾರಿ ಮತ್ತು ಸಿಬ್ಬಂದಿಗಳು ಬಂದ ಬಳಿಕ ಮೃತದೇಹ ಮೇಲೆತ್ತಲಾಯಿತು.







