ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾನೂನು ಕ್ರೈಮ್ ನ್ಯೂಸ್ ಚರ್ಚೆಗಳು ಪ್ರಕಟಣೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಾಮಾನ್ಯ ಸ್ಥಳೀಯ
ನಗರಸಭಾ ವ್ಯಾಪ್ತಿಯಲ್ಲಿ ಕುಡಿಯುವ ನೀರಿನಸಮಸ್ಯೆ ಜಲಸಿರಿ ಅಧಿಕಾರಿಗಳ ಸಭೆ ಕರೆದ ಶಾಸಕರು ಸಮಸ್ಯೆಗಳಿಗೆ ಸ್ಪಂದಿಸದಂತೆ ಅಧಿಕಾರಿಗಳ ತಡೆ: ಸಾರ್ವತ್ರಿಕ ಆಕ್ರೋಶ, ನೀತಿ ಸಂಹಿತೆ: ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಲ್ಲಿ ಅಧಿಕಾರಿಗಳ ಅಡ್ಡಿ- ಎರಡು ದಿನದಲ್ಲಿ ಕುಡಿಯುವ ನೀರು ಸಮಸ್ಯೆ ಪರಿಹಾರ ಮಾಡದಿದ್ದಲ್ಲಿ ಕಚೇರಿಯಲ್ಲಿ ಧರಣಿ ಕೂರುವೆ: ಶಾಸಕ ಅಶೋಕ್ ರೈಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಅಂಬಿಕಾ ಕ್ಯಾಂಪಸ್ ತೆರಳುವ ಅಗಲೀಕರಣಗೊಂಡ ರಸ್ತೆ ಉದ್ಘಾಟನೆ ನಗರ ಬೆಳೆಯಬೇಕಾದರೆ ರಸ್ತೆಗಳು ಸಮರ್ಪಕವಾಗಿರಬೇಕು:ಅಶೋಕ್ ಕುಮಾರ್ ರೈಅಭಿಪ್ರಾಯ ಅಭಿವೃದ್ಧಿ ಕಾರ್ಯಗಳು ಇತ್ತೀಚಿನ ಸುದ್ದಿಗಳು ಇಲಾಖಾ ಮಾಹಿತಿ ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಪ್ರಕಟಣೆ ಮಂಗಳೂರು ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ಸಂಘ-ಸಂಸ್ಥೆಗಳು ಸಾಮಾನ್ಯ ಸ್ಥಳೀಯ
ಶಾಂತಿಮೊಗರು ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ ತಡೆಯುವಂತೆ ಅಗ್ರಹಿಸಿ ಪ್ರತಿಭಟನೆ: ಒಂದು ವಾರದ ಸಮಯವಕಾಶ ಕೊಡಿ ಎಂದ ತಹಸೀಲ್ದಾರ್ಅಭಿವೃದ್ಧಿ ಕಾರ್ಯಗಳು ಇಂದಿನ ಕಾರ್ಯಕ್ರಮ ಇತ್ತೀಚಿನ ಸುದ್ದಿಗಳು ಊರಿನ ಸುದ್ದಿಗಳು ಕರ್ನಾಟಕ ಕಾರ್ಯಕ್ರಮಗಳು ಚರ್ಚೆಗಳು ಜೀವನಶೈಲಿ ಧಾರ್ಮಿಕ ಪ್ರಕಟಣೆ ಪ್ರತಿಭಾ ಪುರಸ್ಕಾರ ಮಂಗಳೂರು ಮನೋರಂಜನೆ ಮಾಹಿತಿ ಮುಂದಿನ ಕಾರ್ಯಕ್ರಮ ಯೋಜನೆಗಳು ರಾಜಕೀಯ ರಾಷ್ಟ್ರೀಯ ಸಂಘ-ಸಂಸ್ಥೆಗಳು ಸಭೆ - ಸಮಾರಂಭ ಸಾಮಾನ್ಯ ಸ್ಥಳೀಯ
ಮೇ13ರಂದು ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವರ್ಧಂತ್ಯುತ್ಸವ, ಪಲ್ಲಕ್ಕಿ, ಬಂಡಿ ಉತ್ಸವPublished
2 months agoon
By
Akkare Newsವಿಪರೀತವಾದ ಬೇಸಿಗೆಯ ಸೆಖೆ ಹೌದು! ಇಂದು ಮಿತಿ ಮೀರಿ ಆಗುತ್ತಿದೆ ಸೆಖೆ. ಕಾರಣ ಯಾರೆಂದರೆ, ಮನುಷ್ಯರಾದ ನಾವೇ. ನಾವು ಪ್ರಕೃತಿಗೆ ಕೊಟ್ಟ ನೋವಿನ ಪರಿಣಾಮದಿಂದ ಇಂದು ಈ ಪರಿಸ್ಥಿತಿ ಎದುರಾಗಿದೆ. ಹಾನಿಕಾರಕ ವಸ್ತುವಿನ ಉರಿಯುವಿಕೆಯಿಂದ ಹೊರಬರುವ ಹೊಗೆಯು ಒಜೋನ್ ಪದರದಲ್ಲಿ ದಿನದಿಂದ ದಿನಕ್ಕೆ ರಂಧ್ರಗಳು ಹೆಚ್ಚಾಗುವಂತೆ ಮಾಡುತ್ತಿದೆ.
ಇದರ ಪರಿಣಾಮದಿಂದ ಸೂರ್ಯನ ಪ್ರಕಾಶಮಾನವಾದ ಬೆಳಕು ನೇರವಾಗಿ ಭೂಮಿಗೆ ಬಿದ್ದು ವಾತಾವರಣದ ಹವಾಮಾನವನ್ನು ಅಲ್ಲೋಲ ಕಲ್ಲೋಲ ಮಾಡುತ್ತಿದೆಯೆಂದು ಹೇಳಬಹುದು. ಜನರು ಇಂದು ತಂಪಾದ ಗಾಳಿಗಾಗಿ ಪರದಾಡುವಂತಹ ಸನ್ನಿವೇಶ ಎದುರಾಗಿದೆ.
ಸೆಖೆಯಿಂದ ಜನರು ಎಲ್ಲಿಯೂ ನೆಮ್ಮದಿಯಾಗಿರಲು ಸಾಧ್ಯವಾಗುತ್ತಿಲ್ಲ. ಜನರು ತಮ್ಮ ಮುಖದಿಂದ ಸಾಗರದಂತೆ ಹರಿಯುವ ಉಪ್ಪಿನ ನೀರನ್ನು ಕರವಸ್ತ್ರದಿಂದ ಉಜ್ಜಿ ಉಜ್ಜಿ ದಣಿದು ಸೋತು ಬಿಟ್ಟಿದ್ದಾರೆ. ಬಸ್ಸಿನಲ್ಲಿ, ಸಮಾರಂಭಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ, ಚರ್ಚು-ಮಸೀದಿ-ದೇವಾಲಯಗಳಲ್ಲಿ, ಬಸ್ಸು ನಿಲ್ದಾಣಗಳಲ್ಲಿ… ಎಲ್ಲಾ ಕಡೆಯೂ ಜನರ ಮಾತಿನಿಂದ ಕೇಳಿ ಬರುವ ಅಬ್ಬಾ
ಸೆಖೆಯೇ ಎಂಬ ಹಾಹಾಕಾರ ಮತ್ತು ಮಕ್ಕಳ ಚೀರಾಟವೇ ಕೇಳಿಸುತ್ತಿದೆ. ಈ ದಿನಗಳಲ್ಲಿ ಫ್ಯಾನಿನ ಗಾಳಿ ಎಷ್ಟಿದ್ದರೂ ಸಾಕಾಗುತ್ತಿಲ್ಲ. ಅದಕ್ಕೆ ಹಿಂದಿನಿಂದಲೂ ಗುರು-ಹಿರಿಯರು ಶಾಲೆಯ ಸುತ್ತಲೂ ಮರ-ಗಿಡಗಳನ್ನು ಹೆಚ್ಚಾಗಿ ಬೆಳೆಸಿಯೆಂದು. ಈಗ ಎಲ್ಲಿ ಕೇಳುತ್ತೇವೆ ಅವರ ಮಾತುಗಳನ್ನು?. ನಾವು ಮರಗಳನ್ನು ನಾಶ ಮಾಡಿ ಅವುಗಳ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣವನ್ನೇ ಮಾಡಿಬಿಡುತ್ತೇವೆ. ಇದು ಎತ್ತ ಸಾಗುತ್ತಿದೆಯೆಂದರೆ ವಿನಾಶದ ಆಂಚಿನತ್ತ ಎಂದು ಹೇಳಬಹುದು. ನಾವು ಮಾಡಿದ ಕರ್ಮವನ್ನು ನಾವೇ ಅನುಭವಿಸುತ್ತಿದ್ದೇವೆ.. ಇದು ಎಂತಹ ವಿಪರ್ಯಾಸ ಅಲ್ಲವೇ..?.
ಅಂದು ಬೇಸಿಗೆಯಲ್ಲಿ ರಜೆ ಸಿಕ್ಕ ಸಂದರ್ಭದಲ್ಲಿ ನಾವು ಹೊರಗಡೆ ಆಟವಾಡುತ್ತಿದ್ದೆವು, ಆದರೆ ಇಂದು ಮನೆಯ ಹೊಸ್ತಿಲನ್ನು ದಾಟಲು ಮನಸ್ಸಾಗುತ್ತಿಲ್ಲ! ಅಷ್ಟೂ.. ಬಿಸಿಯಾಗಿದೆ ಭೂಮಿ!. ಈಗೀಗ ಸೂರ್ಯನ ಪ್ರಕಾಶಮಾನವಾದ ಕಿರಣಗಳು ಮನುಷ್ಯನ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಮೇಲೂ ಗಂಭೀರ ಪರಿಣಾಮವನ್ನು ಬೀರಲಾರಂಭಿಸಿದೆ.
ಆರೋಗ್ಯದ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ. ಈ ಸಮಯದಲ್ಲಿ ಹೆಚ್ಚಾಗಿ ನೀರನ್ನು ಕುಡಿಯುದರಿಂದ ಮತ್ತು ಸ್ವಚ್ಛವಾದ ಹಣ್ಣು-ತರಕಾರಿ ಮತ್ತು ನಾರುಪದಾರ್ಥಗಳನ್ನು ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಇನ್ನಾದರೂ ಗಿಡಗಳನ್ನು ನೆಟ್ಟು ತಂಪಾದ ಪರಿಸರದ ಉಳಿಯುವಿಕೆಗಾಗಿ, ಪ್ರಕೃತಿಯ ಸಂತೋಷಕ್ಕಾಗಿ ಶ್ರಮಿಸೋಣ. ನಾವು ಸುಖವಾಗಿ ಜೀವಿಸೋಣ..ಪ್ರಾಣಿಗಳ ಓಡಾಟ-ಒಡನಾಟಗಳನ್ನು ನೋಡೋಣ.. ಅದರಂತೆ ಪಕ್ಷಿಗಳ ಸುಮಧುರವಾದ ಚಿಲಿಪಿಲಿ ನಾದವನ್ನು, ಇಂಪಾದ ಸ್ವರಗಳನ್ನು ಆಲಿಸುತ್ತಾ ನಮ್ಮ ಮುಂದಿನ ಪೀಳಿಗೆಗೂ ಪರಿಸರದ ಮಹತ್ವವನ್ನು ಸಾರೋಣ.