Connect with us

ಇತರ

ಕಲಾಕ್ಷೇತ್ರದ ಸಾಧನೆಗೆ ಮುಂಬೈಯಲ್ಲಿ ಗೌರವಾರ್ಪಣೆ ಪಡೆದ ಅಶ್ವಥ್‌ ಎನ್ ಪುತ್ತೂರು

Published

on

ಕಲಾಕ್ಷೇತ್ರದ ಸಾಧನೆಗೆ ಮುಂಬೈಯಲ್ಲಿ ಗೌರವಾರ್ಪಣೆ ಪಡೆದ ಅಶ್ವಥ್‌ ಎನ್ ಪುತ್ತೂರು ಕಲಾಕ್ಷೇತ್ರದ ಕಲಾವಿದನ ಸಾಧನೆಯನ್ನು ಗುರುತಿಸಿ ಮುಂಬೈ ಚಾರ್ ಕೋಪ್ ಕನ್ನಡಿಗರ ಬಗಳ ಕಾಂದಿವಲಿ(ರಿ.) ಇವರಿದ ನಟ ರಂಗಭೂಮಿ ಕಲಾವಿದ ನಿರ್ದೇಶಕ ಮಚ್ಚಿಮಲೆ ನಿವಾಸಿ ಅಶ್ವಥ್ ಎನ್ ಪುತ್ತೂರು ಇವರಿಗೆ ಮುಂಬೈ ಯಲ್ಲಿ ಗೌರವಾರ್ಪಣೆ ನೀಡಿದರು.ಕಲಾಕ್ಷೇತ್ರದ ಕಲಾವಿದನ ಸಾಧನೆಯನ್ನು ಗುರುತಿಸಿ ಮುಂಬೈ ಚಾರ್ ಕೋಪ್ ಕನ್ನಡಿಗರ ಬಗಳ ಕಾಂದಿವಲಿ(ರಿ.) ಇವರಿದ ನಟ ರಂಗಭೂಮಿ ಕಲಾವಿದ ನಿರ್ದೇಶಕ ಮಚ್ಚಿಮಲೆ ನಿವಾಸಿ ಅಶ್ವಥ್ ಎನ್ ಪುತ್ತೂರು ಇವರಿಗೆ ಮುಂಬೈ ಯಲ್ಲಿ ಗೌರವಾರ್ಪಣೆ ನೀಡಿದರು.


ಏಳು ಬೀಳುವಿನ ಜೊತೆ ಜೊತೆ ಸಾಕಷ್ಟು ಕನಸುಗಳನ್ನು ಕಾಣುತ್ತಾ, ಸಾಧನೆಯೇ ನನ್ನ ಹಾದಿ ಎಂದು ತಿಳಿದು. ಹೊಸ ಹೊಸ ಯೋಜನೆಗಳನ್ನು ರೂಪಿಸಿ, ಬರಹ, ನಟನೆ, ನಿರ್ದೇಶನ, ಹಾಡುಗಾರಿಕೆಯಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ ಪುತ್ತೂರಿನ ಪ್ರತಿಭೆ ಇವರು. ಇತರರಿಗೆ ಪ್ರೇರಣಾತ್ಮಕವಾಗಿ ಜೀವಿಸಿದಲ್ಲದೆ ಇತರರನ್ನು ತನ್ನವರೆಂದು ಭಾವಿಸಿ, ಅವಕಾಶಗಳನ್ನು ಕಲ್ಪಿಸಿ, ತಾನು ಬೆಳೆಯುವುದರೊಂದಿಗೆ ಸಣ್ಣ ಸಣ್ಣ ಪ್ರತಿಭೆಗಳನ್ನು ಬೆಳೆಸಿ ಪ್ರೋತ್ಸಾಹಿಸುವ ಗರಿಮೆ ಇವರದ್ದು.
ಸಾಧನೆಯನ್ನು ಗುರುತಿಸಿಕೊಂಡು ಸನ್ಮಾನಗಳು ಬರುವುದು ಸಹಜ ಹಾಗೇ ಇವರ ಸಾಧನಗೆ ಹತ್ತು ಹಲವು ವೇದಿಕೆಗಳಲ್ಲಿ ಸನ್ಮಾನಗಳು ಕೂಡ ಲಭಿಸಿವೆ. ಅಭಿಮಾನಿಗಳ ಪ್ರೀತಿ, ವಿಶ್ವಾಸ, ಆಶೀರ್ವಾದವೇ ಪ್ರಶಸ್ತಿ ಎನ್ನುವ ಇವರು ತಮ್ಮ ಸಾಧನೆಯನ್ನು ಬಾನೆತ್ತರಕ್ಕೆ ಪಸರಿಸಿದರು. ಇದೀಗ ಅವರು ತಮ್ಮ ಸಾಧನೆಗೆ ಮುಂಬೈ ಯಲ್ಲಿ ಗೌರವಾರ್ಪಣೆನ್ನು ಪಡೆದುಕೊಂಡಿದ್ದಾರೆ.


 

Continue Reading
Click to comment

Leave a Reply

Your email address will not be published. Required fields are marked *

Advertisement