Published
2 months agoon
By
Akkare News

ಕಾಸರಗೋಡು:ಮಕರಜ್ಯೋತಿ ಮಹೋತ್ಸವಕ್ಕೆ ಶಬರಿಮಲೆಅಯ್ಯಪ್ಪ ಸನ್ನಿಧಾನ ಸಜ್ಜುಗೊಂಡಿದೆ. ಮಕರಜ್ಯೋತಿಯಂದು ಶಬರೀಶನಿಗೆ ತೊಡಿಸಲಾಗುವ ತಿರುವಾಭರಣಗಳ ಮೆರವಣಿಗೆ ಜ.12ರಂದು ಮಧ್ಯಾಹ್ನ 1 ಗಂಟೆಗೆ ಪಂದಳಂ ವಲಿಯ ಕೋಯಿಕ್ಕಲ್ ಶ್ರೀ ಧರ್ಮಶಾಸ್ತ ದೇವಸ್ಥಾನದಿಂದ ಹೊರಡಲಿದೆ. ಜ.14ರಂದು ತಿರುವಾಭರಣ ಮೆರವಣಿಗೆ ಸನ್ನಿಧಾನ ತಲುಪಲಿದೆ.

ಈ ಬಾರಿ ಪಂದಳಂ ಅರಮನೆಯ ರಾಜ ಪ್ರತಿನಿಧಿಯಾಗಿ ಪುನರ್ಧಂನಾಳ್ ನಾರಾಯಣ ವರ್ಮ ಮೆರವಣಿಗೆಯನ್ನು ಮುನ್ನಡೆಸುವರು. ಗುರು ಸ್ವಾಮಿ ಮರುದಮನ ಶಿವನಕುಟ್ಟಿ ನೇತೃತ್ವದಲ್ಲಿ 26 ಮಂದಿಯ ತಿರುವಾಭರಣ ವಾಹಕ ಸಂಘ ಮತ್ತು 4 ಮಂದಿ ಸಹಾಯಕರು ಸಹಿತ 30 ಸದಸ್ಯರ ತಂಡ ತಿರುವಾಭರಣ ಪೆಟ್ಟಿಗೆಯನ್ನು ಹೊತ್ತು ಶಬರಿಮಲೆಗೆ ತಲುಪಿಸುವರು.








