Published
1 month agoon
By
Akkare News
ಕಾರವಾರ(ಫೆ.03): ಮಹಿಳೆಯ ಜೊತೆ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ (Illegal Relationship) ಹೊಂದಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಈ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಲೆ ಮಾಡಲು ಹೆಂಡ್ತಿ ಸ್ಕೆಚ್ ಹಾಕಿದ್ದಳಂತೆ. ಆದ್ರೆ ಹಂತಕರ ಪ್ಲಾನ್ ಜಸ್ಟ್ ಮಿಸ್ ಆಗಿದೆ.
ದುರಾದೃಷ್ಟ ಎನ್ನುವಂತೆ ತಮ್ಮನನ್ನು ಪಾರು ಮಾಡಲು ಹೋದ ಅಣ್ಣನೇ ಕೊಲೆಯಾಗಿದ್ದಾನೆ. ಈ ಪ್ರಕರಣ ಸಂಬಂಧ ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ (Kamalakar Bhatt) ಅವರನ್ನ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ಜೊತೆ ಖ್ಯಾತ ಜ್ಯೋತಿಷಿ ಅಕ್ರಮ ಸಂಬಂಧ!?
ಖ್ಯಾತ ಜ್ಯೋತಿಷಿ ಕಮಲಾಕರ್ ಭಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಮಹೇಶ್ ನಾಯ್ಕ್ ಎಂಬುವವರ ಪತ್ನಿ ಸುಚಿತ್ರಾ ಎಂಬಾಕೆಯ ಜೊತೆ ಜ್ಯೋತಿಷಿ ಕಮಲಾಕರ್ ಭಟ್ ಅನೈತಿಕ ಸಂಬಂಧ ಹೊಂದಿದ್ರು ಎನ್ನುವ ಆರೋಪ ಕೇಳಿ ಬಂದಿದೆ.

ಮಹೇಶ್ ನಾಯ್ಕ್ ಕೊಲೆ ಪ್ಲಾನ್
ಅನೈತಿಕ ಸಂಬಂಧದ ಬಗ್ಗೆ ಪ್ರಶ್ನೆ ಮಾಡಿದ ಮಹೇಶ್ ನಾಯ್ಕ್ ನನ್ನು ಕೊಲೆ ಮಾಡಿಸಲು ಪತ್ನಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಸೇರಿದಂತೆ ಕೆಲವರು ಪ್ಲಾನ್ ಮಾಡಿದ್ದರಂತೆ. ಆದ್ರೆ ಈ ಹಂತಕರ ಕೊಲೆ ಪ್ಲಾನ್ನಲ್ಲಿ ಮಹೇಶ್ ನಾಯ್ಕ್ ಜಸ್ಟ್ ಮಿಸ್ ಆಗಿದ್ದಾರೆ. ಆದ್ರೆ ಈತನ ಸಹೋದರ ವಸಂತ್ ನಾಯ್ಕ್ ಕೊಲೆಯಾಗಿದ್ದಾನೆ.

ತಮ್ಮನನ್ನ ಕಾಪಾಡಲು ಹೋಗಿ ಅಣ್ಣ ಸಾವು
ಸುಚಿತ್ರಾ ಕಳುಹಿಸಿದ್ದ ಗ್ಯಾಂಗ್ ಏಕಾಏಕಿ ಮಹೇಶ್ ನಾಯ್ಕ್ ಮೇಲೆ ಹಲ್ಲೆಗೆ ಮುಂದಾಗಿತ್ತು. ಈ ವಿಚಾರ ತಿಳಿದು ಸಹೋದರ ಮಹೇಶ್ನನ್ನು ಕಾಪಾಡಲು ಅಣ್ಣ ವಸಂತ ನಾಯ್ಕ್ ಓಡೋಡಿ ಬಂದಿದ್ದರು. ಗಲಾಟೆಯಲ್ಲಿ ಮಹೇಶ್ ನಾಯ್ಕ್ ಬಜಾವ್ ಆಗಿದ್ದು, ಕಾಪಾಡಲು ಬಂದ ಅಣ್ಣ ವಸಂತ್ ನಾಯ್ಕ್ ಬರ್ಬರವಾಗಿ ಕೊಲೆಯಾಗಿದ್ದಾರೆ.

ಕಮಲಾಕರ ಭಟ್ ಸ್ವಾಮಿ ಅರೆಸ್ಟ್
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಘಟನೆ ನಡೆದಿದ್ದು, 24 ಗಂಟೆಗಳಲ್ಲಿ ವಸಂತ್ ನಾಯ್ಕ್ ಕೊಲೆ ಸಂಬಂಧ ನಾಲ್ವರನ್ನ ಪೊಲೀಸರು ಬಂಧಿಸಿದ್ದಾರೆ. ಮಹಿಳೆ ಸುಚಿತ್ರಾ, ಸುಚಿತ್ರಾಳ ತಂದೆ ಲೋಕನಾಥ್, ಕಮಲಾಕರ ಸ್ವಾಮಿ ಭಟ್ ಅವರನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.






