Published
1 day agoon
By
Akkare News
ಪತ್ನಿಗೆ ಮಾಸಿಕ 9,000 ರೂಪಾಯಿ ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಪತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನ ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರಿದ್ದ ಹೈಕೋರ್ಟ್ ಪೀಠವು ಈ ಮಾತನ್ನ ಹೇಳಿದೆ. ಮದುವೆಯ ಹೆಸರಿನಲ್ಲಿ ಮಹಿಳೆಯ ವೈಯಕ್ತಿಕ ಆಯ್ಕೆ, ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನ ಕಸಿಯುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ತವರು ಮನೆಗೆ ಹೋಗಲು ಪತಿಯ ಅನುಮತಿ ಬೇಕಿಲ್ಲ
ಮನೆಗೆಲಸ ಕೇವಲ ಮಹಿಳೆಯ ಜವಾಬ್ದಾರಿಯಲ್ಲ
ಕುಟುಂಬದ ಮೇಲಿನ ಪತ್ನಿಯ ಸಮರ್ಪಣಾ ಭಾವವನ್ನ ಆಕೆಯ ವಿಧೇಯತೆ ಅಥವಾ ಗುಲಾಮಗಿರಿಯೆಂದು ಅಳೆಯಲು ಸಾಧ್ಯವೇಯಿಲ್ಲ. ತನ್ನ ವೃತ್ತಿಜೀವನ, ಆರ್ಥಿಕ ವಿಚಾರಗಳು ಮತ್ತು ಜೀವನದ ಇತರ ಆಯಾಮಗಳ ಬಗ್ಗೆ ಸ್ವತಂತ್ರವಾಗಿ ನಿರ್ಧಾರಗಳನ್ನ ತೆಗೆದುಕೊಳ್ಳುವ ಸಂಪೂರ್ಣ ಹಕ್ಕು ಮಹಿಳೆಗೆ ಇದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಜೀವನಾಂಶ ಕಡಿತಕ್ಕೆ ಕೋರ್ಟ್ ನಕಾರ



