Published
1 year agoon
By
Akkare News
ನಾವು ಕಾಣುವ ದೊಡ್ಡ ದೊಡ್ಡ ಕನಸುಗಳೇ ನಮ್ಮನ್ನು ದೊಡ್ಡ ಸಾಧನೆಗೆ ಪ್ರೇರೇಪಿಸುತ್ತವೆ. ಅದಕ್ಕೆ ಹಿರಿಯರು ಹೇಳಿದ್ದು ಕನಸು ಕಾಣುವಾಗ ದೊಡ್ಡದಾಗಿ ಕನಸು ಕಾಣಿರೆಂದು. ಕನಸು ಕಂಡರೆ ಸಾಕೇ; ಅದನ್ನು ನನಸು ಮಾಡುವತ್ತಲೂ ಗುರಿ ಇಡಬೇಕು. ಅದು ಹೇಗೆ ಎಂದು ಕೇಳುತ್ತೀರಾ? ಇಲ್ಲಿದೆ ಉತ್ತರ.

ಸಂತೃಪ್ತ ಗ್ರಾಹಕರನ್ನು ಹೊಂದಿರುವ ಆಶೀರ್ವಾದ ಸಂಸ್ಥೆ ಇದೀಗ ಕೇವಲ 1 ಸಾವಿರ ರೂ.ಗೆ 2 ಮನೆಯನ್ನು ನೀಡುತ್ತಿದೆ. ನೀವು ಕಂಡ ಕನಸನ್ನು ನನಸಾಗಿಸಲು ಇದು ಸುವರ್ಣಾವಕಾಶವಲ್ಲದೇ ಮತ್ತೇನು ಹೇಳಿ!! ಇಷ್ಟು ಮಾತ್ರವಲ್ಲ, ಪ್ರತಿ ತಿಂಗಳು 10 ಜನರಿಗೆ ಚಿನ್ನದ ಗಿಫ್ಟನ್ನು ಕೊಡಲಿದೆ. ಅರೆ, ಇದೇನು ತಮಾಷೆ ಅಂದ್ಕೊಂಡಿರೇ! ಖಂಡಿತಾ ತಮಾಷೆ ಅಲ್ಲ. ವಾಸ್ತವ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸಾವಿರಾರು ಗ್ರಾಹಕರ ಪ್ರೀತಿ ಸಂಪಾದಿಸಿಕೊಂಡಿದೆ ಆಶೀರ್ವಾದ ಸಂಸ್ಥೆ. ಹಲವಾರು ವರ್ಷಗಳಿಂದ ನಿಸ್ವಾರ್ಥ ಸೇವೆ ನೀಡುತ್ತಿರುವ ಆಶೀರ್ವಾದ ಸಂಸ್ಥೆ, ಕರ್ನಾಟಕ ಕೇರಳದ ಗಡಿ ಭಾಗ ಸೇರಿದಂತೆ ವಿದೇಶದಲ್ಲಿಯೂ ಗ್ರಾಹಕರನ್ನು ಹೊಂದಿದೆ.


ಇದೀಗ ಸಂಸ್ಥೆಯ ಎರಡನೇ ಯೋಜನೆ (Project)ಯನ್ನು ಗ್ರಾಹಕರ ಮುಂದಿಡುತ್ತಿದೆ. ಗ್ರಾಹಕರ ಮುಖದಲ್ಲಿ ಮತ್ತಷ್ಟು ಸಂತೃಪ್ತಿಯ ಮಂದಹಾಸ ಮೂಡುವುದು ಖಂಡಿತಾ ಎನ್ನುವುದು ಸಂಸ್ಥೆಯ ಪ್ರಮುಖರ ಅಭಿಮತ.



