Published
3 days agoon
By
Akkare Newsಪುತ್ತೂರು: ನರಿಮೊಗರು ಗ್ರಾಮದ ಪಾಣಂಬು ಎಂಬಲ್ಲಿ ವಿಪರೀತ ಮಳೆ ಸುರಿದು ಮಾಜಿ ಸೈನಿಕ ವಸಂತ ಪೂಜಾರಿ ಯವರ ತೋಟಕ್ಕೆ ಗುಡ್ಡೆ ಕುಸಿದು ಸುಮಾರು ಫಲ ಬರುವ 450 ಅಡಿಕೆ ಮರಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ತೋಟದ ಜಾಗದ ಬದಿಯಲ್ಲಿ ದೊಡ್ಡ ತೊಡಿಗೆ ಮಣ್ಣು ಬಿದ್ದು ನೀರುಗಳು ತೋಟದಲ್ಲಿ ಹರಿದು ಅಪಾರ ಪ್ರಮಾಣದ ಅಡಿಕೆ ಮರಗಳು ನಾಶವಾಗಿದೆ. ಚೆನ್ನಪ್ಪ ಪೂಜಾರಿಯವರ ಮನೆಯ ಹಿಂಬದಿಯ ಗುಡ್ಡಜರೆಯುವ ಹಂತದಲ್ಲಿದ್ದು ಪ್ಲಾಸ್ಟಿಕ್ ಓದಿಕೆ ಹಾಕಿ ತಾತ್ಕಾಲಿಕ ಪರಿಹಾರ ಮಾಡಲಾಗಿದೆ.
ಗುಡ್ಡದ ಮೇಲೆ ಅರಣ್ಯ ಇಲಾಖೆಯವರ ಇಂಗು ಗುಂಡಿ ಇದ್ದ ಕಾರಣ ನೀರು ನಿಂತು ಬರೆ ಕುಸಿತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಸ್ಥಳಕ್ಕೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪೊನ್ನಪ್ಪ ಕೈದಾಡಿ. ಕಾಂಗ್ರೆಸ್ ಮುಖಂಡರಾದ ಬಾಬು ಶೆಟ್ಟಿ ವೀರಮಂಗಲ. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದ್ದಾರೆ.