ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತ್ತೀಚಿನ ಸುದ್ದಿಗಳು

ಸುಬ್ರಹ್ಮಣ್ಯ ಠಾಣೆಯ 9 ಪೊಲೀಸರ ವರ್ಗಾವಣೆ, 6 ಮಂದಿ ಕಡಬಕ್ಕೆ

Published

on

ಕಡಬ: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.

ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಿಂದ ಒಟ್ಟು ಒಂಭತ್ತು ಪೊಲೀಸರು ವರ್ಗಾವಣೆಯಾಗಿ ದ್ದು ಈ ಪೈಕಿ ಆರು ಪೊಲೀಸರು ಕಡಬ ಠಾಣೆಗೆ ವರ್ಗಾವಣೆಯಾಗಿದ್ದಾರೆ.

ಕಡಬ ಠಾಣೆಗೆ ವರ್ಗಾವಣೆಯಾಗಿರುವ ಪೊಲೀಸರು:
ಎ. ಎಸ್. ಐ ಕರುಣಾಕರ ಬಿ.ಎನ್ , ರೋಹಿತೇಶ್ವರ , ಬಸವರಾಜ್ ಎಚ್ ವಂದಲ್, ವಿಠ ಮಳಿಯಪ್ಪ, , ಅರವಿಂದ್ ಚೌಹನ್, ಮಹಿಳಾ ಕಾಸ್ಟೇಬಲ್ ಮಹಾಲಕ್ಷ್ಮೀ ಯಲವಟ್ಟಿ ಕಡಬಕ್ಕೆ, ನಿತೀಶ್ ವಿ ಶೆಟ್ಟಿ, ದಯಾನಂದ ಬೆಳ್ಳಾರೆಗೆ, ಕುಮಾರಸ್ವಾಮಿ ಉಪ್ಪಿನಂಗಡಿಗೆ ವರ್ಗಾವಣೆಯಾಗಿದ್ದಾರೆ

 

ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್ ಪಿ ಕಚೇರಿಯಲ್ಲಿ ಎಲ್‌ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗಿತ್ತು

 

 

 

 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version