Published
18 hours agoon
By
Akkare News
ಧಾರವಾಡದಲ್ಲಿ ನಡೆದ ಆ ಘೋರ ಘಟನೆ ಇಡೀ ಮಾನವಕುಲವೇ ಕಣ್ಣೀರು ಇಡುವಂತೆ ಮಾಡಿದೆ. ಆ ರಸ್ತೆಯಲ್ಲಿ ಹರಿದಿದ್ದು ಕೇವಲ ರಕ್ತವಲ್ಲ, ಒಂದು ಪುಟ್ಟ ಸಂಸಾರದ ನುಚ್ಚುನೂರಾದ ಕನಸುಗಳು! ತಾಯಿ-ಮಗುವಿನ ಮೇಲಿನ ಭೀಕರ ದಾಳಿಯ ಆ ರಕ್ತದ ಮಡುವಿನಲ್ಲಿ, ಪುಟ್ಟ ಕಂದಮ್ಮ ನೇಹಿತ್ ಇನ್ನೂ ಉಸಿರಾಡುತ್ತಿದ್ದ. ಆ ಎಳೆ ಎದೆಯ ಕೊನೆಯ ಒದ್ದಾಟವನ್ನು ನೋಡಿದ ಕ್ಷಣ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾದ ಎನ್. ಶಶಿಕುಮಾರ್ ಅವರೊಳಗಿದ್ದ ಸೌಮ್ಯ ತಂದೆಯೊಬ್ಬ ಜಾಗೃತನಾಗಿದ್ದ.