ಇಡ್ಕಿದು ಗ್ರಾಮ ಬಂಟ್ವಾಳ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಸ್ಥಳೀಯರು ಅನುಮತಿ ಪತ್ರವನ್ನು ಪಡೆಯದೆ ಅಕ್ರಮವಾಗಿ ಮನೆ ಕಟ್ಟಡ ಕಟ್ಟುವುದಕ್ಕೆ ತಡೆ ಕೋರಿ ಅರ್ಜಿಸಲ್ಲಿಸಿರುತ್ತಾರೆ. ಕುಳ ಗ್ರಾಮದ ಸರ್ವೆ ನಂ : 12/1 ರಲ್ಲಿ ದಿ. ಗಿರಿಯಪ್ಪ ಗೌಡರ ಹೆಸರಿನಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ವಾಸ್ತವ್ಯದ 2 ಮನೆಗಳನ್ನು ಅನಧಿಕೃತವಾಗಿ ಸದ್ರಿ ಇಡ್ಕಿದು ಗ್ರಾಮದ ನಿವಾಸಿ ಗಣೇಶ್ ರೈ ಎಮ್ ಮತ್ತು ಇತರರು ಕಾನೂನು ಬಾಹಿರವಾಗಿ ದಿವಂಗತರ ಜಮೀನಿನಲ್ಲಿ ಯಾವುದೇ ಸ್ಥಳಿಯ ಪರವನಿಗೆ ಇತ್ಯಾದಿ ಇಲ್ಲದೆ ಕಟ್ಟಡ ಕಟ್ಟಿರುವುದು ಕಂಡು ಬರುತ್ತದೆ. ಸದ್ರಿ ಕಟ್ಟಡ ಕಾಮಗಾರಿಯನ್ನು ನಿಲ್ಲಿಸಿ ಸದ್ರಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕಾಗಿ ಮತ್ತು ತಕ್ಷಣ ಕಾಮಗಾರಿಗೆ ತಡೆ ನೀಡಬೇಕಾಗಿ ವಿನಂತಿಸಿರುತ್ತಾರೆ.