Published
21 hours agoon
By
Akkare News
ಅವರು ಒಳಮೊಗ್ರು ಗ್ರಾಮದ ಕುಟಿನೋಪ್ಪಿನಡ್ಕ ಸಮೀಪದ ಮುರುವದಿಂದ ಕಲ್ಲಡ್ಕ ಮೂಲಕ ದರ್ಬೆತ್ತಡ್ಕ ರಸ್ತೆಗೆ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಈಗ ಇರುವ ಸೇತುವೆ ಕಿರಿದಾಗಿದೆ, ಅಗಲ ಕಡಿಮೆ ಇದೆ, ಮಾಜಿ ಶಾಸಕ ವಿನಯಕುಮಾರ್ ಸೊರಕೆಯವರ ಕಾಲದಲ್ಲಿ ಈ ಸೇತುವೆ ನಿರ್ಮಾಣವಾಗಿತ್ತು. ಆಗಿನ ಕಾಲಕ್ಕೆ ಇದುವೇ ದೊಡ್ಡ ಸೇತುವೆಯಾಗಿರಬಹುದು ಆದರೆ ಆ ಬಳಿಕ ಶಾಸಕರಾದವರು ಇಲ್ಲಿನ ಜನರ ಬೇಡಿಕೆಯನ್ನು ಈಡೇರಿಸಿಲ್ಲ. ಯಾಕೆ ಇಲ್ಲಿಗೆ ಸೇತುವೆ ನಿರ್ಮಾಣ ಮಾಡಿಲ್ಲ ಎಂದು ವೋಟು ಹಾಕಿದ ಪ್ರತೀಯೊಬ್ಬರೂ ಚಿಂತನೆ ಮಾಡಬೇಕು. ಈ ಭಾಗದಲ್ಲಿ ಕಾಂಗ್ರೆಸ್ ವೋಟು ಕಡಿಮೆ ಎಂದು ನನ್ನಲ್ಲಿ ಹೇಳಿದ್ದರು ಆದರೂ ನಾನು ಅಭಿವೃದ್ದಿಯಲ್ಲಿ ಪಕ್ಷಬೇಧ ಮಾಡಲ್ಲ ಎಂಬ ಉದ್ದೇಶದಿಂದ ಮತ್ತು ಮುಂದೆ ನನ್ನ ಜೊತೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಬೇಡಿಕೆ ಈಡೇರಿಸಿದ್ದೇನೆ. ಅಗತ್ಯವಾಗಿ ಬೇಕಾದ ಇಲ್ಲಿನ ಸೇತುವೆಯನ್ನು ಮುಂದಿನ ೬ ತಿಂಗಳಲ್ಲಿ ಸಂಚಾರ ಮುಕ್ತವಾಗಬಹುದು ಎಂದು ಹೇಳಿದರು.
ನನ್ನ ಪತ್ನಿ ಕೂಡಾ ಬೇಸರಪಟ್ಟಿದ್ದಳು ಈ ಭಾಗಕ್ಕೆ ವೋಟು ಕೇಳಲು ಬಂದಾಗ ನನ್ನ ಪತ್ನಿ ಸೇತುವೆಯ ಕಂಡು ಬೇಸರಮಾಡಿದ್ದಳು. ಚುನಾವಣೆ ಕಳೆದ ಶಾಸಕನಾದ ಮೇಲೆ ಅವಳು ಕೂಡಾ ಇಲ್ಲಿನ ಸೇತುವೆಗೆ ಅನುದಾನ ಇಡುವಂತೆ ಮನವಿ ಮಾಡಿದ್ದಳು. ಈ ಭಾಗದ ಹಮೀದ್ ಎಂಬವರು ಹಲವು ತಿಂಗಳಿಂದ ಇದರ ಬೆನ್ನು ಬಿದ್ದಿದ್ದರು, ದಿನಾಲು ನನಗೆ ಕರೆ ಮಾಡಿ ಸೇತುವೆಯ ವಿಚಾರವನ್ನು ಕೇಳುತ್ತಿದ್ದರು, ಇದೇ ಕಾರಣಕ್ಕೆ ಹಮೀದ್ ರವರಿಂದಲೇ ತೆಂಗಿನ ಕಾಯಿ ಒಡೆಸಿದ್ದೇನೆ. ನಿಮ್ಮ ಬೇಡಿಕೆ ಈಡೇರಿಸಿದ್ದೇನೆ ಮುಂದೆ ನೀವು ನಮ್ಮ ಜೊತೆ ಇರುತ್ತೀರಿ ಎಂಬ ಪೂರ್ಣ ಭರವಸೆಯೂ ನನಗಿದೆ ಎಂದು ಶಾಸಕರು ಹೇಳಿದರು.
ಬಡವರ ಕೆಲಸ ಮಾಡುವಾಗ ಬಿಜೆಪಿಯಿಂದ ಬೆಂಬಲ ಇರಲಿಲ್ಲ ನಾನು ಬಿಜೆಪಿಯಲ್ಲಿದ್ದಾಗ ಒಂದಷ್ಟು ಮಂದಿಗೆ ೯೪ ಸಿ, ೯೪ ಸಿಸಿ ಮಾಡಿಕೊಡಿ ಎಂದು ಮಾಜಿ ಶಾಸಕರ ಬಳಿ ಕಳುಹಿಸುತ್ತಿದ್ದೆ ಆದರೆ ಅವರು ಅದನ್ನು ಮಾಡುತ್ತಿರಲಿಲ್ಲ. ಅಶೋಕ್ ರೈ ಕಳಿಸಿದ ಯಾವುದೇ ವ್ಯಕ್ತಿಯನ್ನು ಬಿಜೆಪಿಯವರು ಕೆಲಸ ಮಾಡಿಕೊಡದೆ ನನಗೆ ಅವಮಾನ ಮಾಡುತ್ತಿದ್ದರು. ಬಡವರ ಕೆಲಸ ಮಾಡುವುದು ಬಿಜೆಪಿಗರಿಗೆ ಇಷ್ಟವಿಲ್ಲದೇ ಇರುವುದೇ ಇದಕ್ಕೆ ಸಾಕ್ಷಿಯಾಗಿದೆ. ನಾನು ಬಿಜೆಪಿಯಲ್ಲಿದ್ದಾಗ ಬಿಜೆಪಿಯವರು ಯಾವುದೇ ಕಾರ್ಯಕ್ರಮ ಮಾಡಲಿ ಅವರ ಶರಬತ್ತಿನ ಬಿಲ್ನಿಂದ ಹಿಡಿದು ಎಲ್ಲಾ ಬಿಲ್ಗಳು ನನ್ನ ಬಳಿಗೇ ಬರುತ್ತಿತ್ತು ನಾನೇ ಅದನ್ನು ಪಾವತಿ ಮಾಡುತ್ತಿದ್ದೆ. ನಾನು ಬಡವರಿಗೆ ಮಾಡುತ್ತಿರುವ ಸೇವಬೆಯನ್ನು ನೋಡಿದ್ದ ಅವರು ಇವನಿಗೆ ಸ್ಥಾನ ಮಾನ ಕೊಟ್ರೆ ಮೇಲೆ ಬರಬಹುದು ಎಂಬ ನಂಜಿನಿಂದ ನನಗೆ ಕೇವಲ ಕಾರ್ಯಕಾರಿಣಿ ಎಂಬ ಸಣ್ಣ ಸದಸ್ಯತ್ವ ಕೊಟ್ಟಿದ್ದರು ಎಂದು ಹಿಂದಿನ ನೆನಪುಗಳನ್ನು ಶಾಸಕರು ಮೆಲುಕು ಹಾಕಿದರು. 

ಸೊರಕೆ ಬಳಿಕ ಅನೇಕ ಮಂದಿ ಶಾಸಕರು ಬಂದ್ರು, ಸಂದರು ಬಂದ್ರು ಆದರೆ ಅವರು ಯಾರೂ ಇಲ್ಲಿಗೆ ಬಂದಿಲ್ಲ, ಸಮಸ್ಯೆ ಆಲಿಸಿಲ್ಲ. ಕಾಂಗ್ರೆಸ್ ಶಾಸಕ ಅಶೋಕ್ ರೈ ಬಂದು ಸಂಕಷ್ಟ ಆಲಿಸಿದ್ದಾರೆ ಎಂದ ಅವರು ಕಾಂಗ್ರೆಸ್ ಎಂದೂ ಅಭಿವೃದ್ದಿ ಪರ ಎಂಬುದು ಸಾಭೀತಾಗಿದೆ. ವೋಟಿನ ಸಮಯದಲ್ಲಿ ಧರ್ಮದ ಹೆಸರು ಹೇಳಿ ವೋಟು ಪಡೆಯುವವರು ಅಭಿವೃದ್ದಿ ಕೆಲಸ ಮಾಡುವುದಿಲ್ಲ ಅವರಿಗಹೆ ಅದು ಬೇಕಾಗಿಲ್ಲ , ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಕೈ ಬಲಪಡಿಸುವ ಕೆಲಸ ನಾವೆಲ್ಲರೂ ಸೇರಿ ಮಾಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಒಳಮೊಗ್ರು ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ಪೂಜಾರಿ ಬೊಳ್ಳಾಡಿ, ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ವಿನೋದ್ ಶೆಟ್ಟಿ ಮುಡಾಲ, ಯುವ ಕಾಂಗ್ರೆಸ್ ಮುಖಂಡ ರಕ್ಷಿತ್ ರೈ ಮುಗೇಉ, ಬೂತ್ ಅಧ್ಯಕ್ಷ ಅಝೀಝ್ ನೀರ್ಪಾಡಿ, ಗೋವಿಂದ ನಾಯ್ಕ, ಹಂಝ ಉಜಿರೋಡಿ, ಸ್ಥಳೀಯ ಮುಖಂಡರಾದ ಸಂಕಪ್ಪ ಆಳ್ವ, ಸುಧಾಕರ ಆಳ್ವ, ತ್ಯಾಂಪಣ್ಣ ಆಳ್ವ, ವಸಂತ ಶೆಟ್ಟಿ, ಹಾರಿಸ್ ಮುಳಿಯಡ್ಕ, ರಮೇಶ್ ಆಳ್ವ ಕಲ್ಲಡ್ಕ, ಸುಧಾಕರ ಆಳ್ವ ಕಲ್ಲಡ್ಕ, ಜಯರಾಮ ರೈ, ಮೋಹನ ರೈ ಕಲ್ಲಡ್ಕ, ಚಿದಾನಂದ ರೈ, ರಾಧಾಕೃಷ್ಣ ರೈ, ರಾಜೇಶ್ ರೈ, ಜನಾರ್ಧನ ರೈ, ಮಂಜುನಾಥ, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಬದ್ರು ಪರ್ಪುಂಜ, ರಝಾಕ್ ಪರ್ಪುಂಜ, ಮಹಮ್ಮದ್ ಅಡ್ಕ,ಪ್ರವೀಣ್ ಅಡ್ಕ ಮೊದಲಾದವರು ಇದ್ದರು. ಸೇತುವೆಗೆ ಅನುದಾನ ಮಂಜೂರು ಮಾಡಿದ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮಕ್ಕೆ ಸ್ವಾಗತಿಸಿ ವಂದಿಸಿದರು.

