ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಆಟೋ ಚಾಲಕನ ಆತ್ಮಹತ್ಯೆ ಕೇಸ್​ಗೆ ಬಿಗ್​ ಟಿಸ್ಟ್ ಶೆಡ್​ನಲ್ಲಿ ಹತ್ಯೆ ಮಾಡಲಾಯ್ತೆ?

Published

on

ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ಸೆಪ್ಟೆಂಬರ್ 3 ರಂದು ನೇಣುಬಿಗಿದು ಸ್ಥಿತಿಯಲ್ಲಿ ದೇವಿಪ್ರಸಾದ್ (27) ಎಂಬ ಆಟೋ ಚಾಲಕನ ಮೃತದೇಹ ಪತ್ತೆಯಾಗಿತ್ತು. ಸದ್ಯ ಈ ಕೇಸ್​ಗೆ ಸಂಬಂಧಿಸಿದಂತೆ ಯುವಕನ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮೃತ ಯುವಕನ ಪೋಷಕರಿಂದ‌ ಪೊಲೀಸರಿಗೆ ದೂರು ನೀಡಲಾಗಿದೆ.

 

ಮದೆನಾಡು ಗ್ರಾಮದಲ್ಲಿ ಮೃತ ದೇವಿಪ್ರಸಾದ್ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸಾವಿಗೂ ಮುನ್ನ ದೇವಿಪ್ರಸಾದ್ ಮೇಲೆ ಊರಿನ ಕೆಲವರಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ. ಹಲ್ಲೆ‌ ಮಾಡಿದ ಹಲವರ ಜೊತೆ ದೇವಿಪ್ರಸಾದ್​ಗೆ ಹಿಂದಿನಿಂದಲೂ ದ್ವೇಷ ಇತ್ತು.
ಹಲ್ಲೆ ಬಳಿಕ ದೇವಿಪ್ರಸಾದ್​ನನ್ನು ಶೆಡ್​ನಲ್ಲಿ ನೇಣಿಗೇರಿಸಿದ್ದಾರೆ. ದ್ವೇಷದಿಂದ ಕೊಲೆ ಮಾಡಲಾಗಿದೆ ಎಂದು ಆರೋಪ ಮಾಡಲಾಗಿದೆ. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪೊಷಕರಿಂದ ದೂರು ನೀಡಲಾಗಿದೆ.

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version