Published
1 year agoon
By
Akkare News
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಮತ್ತು ಸಾಂಕ್ರಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಸಾರ್ವಜನಿಕರು ತಮ್ಮ ಮನೆಯಲ್ಲಿ ದಿನನಿತ್ಯ ಉಪಯೋಗಿಸುತ್ತಿರುವ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಉಪಯೋಗಿಸುವಂತೆ ಪುತ್ತೂರು ನಗರ ಸಭೆ ಆಯುಕ್ತರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಮತ್ತು ಸಾಂಕ್ರಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಸಾರ್ವಜನಿಕರು ತಮ್ಮ ಮನೆಯಲ್ಲಿ ದಿನನಿತ್ಯ ಉಪಯೋಗಿಸುತ್ತಿರುವ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಉಪಯೋಗಿಸುವಂತೆ ಪುತ್ತೂರು ನಗರ ಸಭೆ ಆಯುಕ್ತರು ಪ್ರಕಟನೆಯಲ್ಲಿ ಸೂಚಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಸೂಚನೆಯಂತೆ ಈ ಪ್ರಕಟನೆಯನ್ನು ಹೊರಡಿಸಲಾಗಿದ್ದು, . ಉದ್ದಿಮೆದಾರರು ತಮ್ಮ ಹೋಟೇಲ್ ಹಾಗೂ ವ್ಯಾಪಾರ ನಡೆಸುವ ಸ್ಥಳಗಳಲ್ಲಿ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಮತ್ತು ತಮ್ಮಲ್ಲಿ ವಿತರಿಸುವ ಆಹಾರ ಪದಾರ್ಥಗಳನ್ನು ಬಿಸಿ ನೀರಿನಲ್ಲಿ ಶುಚಿಗೊಳಿಸಿ ಆಹಾರ ವಿತರಿಸಲು ಕೂಡ ಸೂಚಿಸಲಾಗಿದೆ.
ನಗರಸಭೆ ಕಾರ್ಯಾಲಯ ಹೊರಡಿಸಿರುವ ಪ್ರಕಟನೆಯಲ್ಲಿ ಏನಿದೆ ?
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರ ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಲರಾ ಮತ್ತು ಸಾಂಕ್ರಮಿಕ ರೋಗವು ಹರಡುತ್ತಿರುವ ಹಿನ್ನಲೆಯಲ್ಲಿ ಪುತ್ತೂರು ನಗರಸಭೆಯ ಸಾರ್ವಜನಿಕರು ತಮ್ಮ ಮನೆಯಲ್ಲಿ ದಿನನಿತ್ಯ ಉಪಯೋಗಿಸುತ್ತಿರುವ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಉಪಯೋಗಿಸತಕ್ಕದ್ದು.
‘
ಉದ್ದಿಮೆದಾರರು ತಮ್ಮ ಹೋಟೇಲ್ ಹಾಗೂ ವ್ಯಾಪಾರ ನಡೆಸುವ ಸ್ಥಳಗಳಲ್ಲಿ ಶುದ್ಧ ನೀರನ್ನು ಬಿಸಿ ಮಾಡಿ ಕುದಿಸಿ ಆರಿಸಿದ ನೀರನ್ನು ಮತ್ತು ತಮ್ಮಲ್ಲಿ ವಿತರಿಸುವ ಆಹಾರ ಪದಾರ್ಥಗಳನ್ನು ಬಿಸಿ ನೀರಿನಲ್ಲಿ ಶುಚಿಗೊಳಿಸಿ ಆಹಾರ ವಿತರಿಸಲು ಸೂಚಿಸಲಾಗಿದೆ.