Published
1 year agoon
By
Akkare News
ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ಬಾರಿಕೆಯಲ್ಲಿ ಫೆ.12 ಮತ್ತು 13ರಂದು ನಡೆಯಲಿರುವ 44ನೇ ವರ್ಷದ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಜ.17ರಂದು ನಡೆಯಿತು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ವೇದನಾಥ ಸುವರ್ಣ, ಕಾರ್ಯದರ್ಶಿ ವಸಂತ ಗೌಡ ಕೆದ್ಕಾರ್, ಮೊಕ್ತೇಸರರಾದ ಮೋನಪ್ಪ ಕುಲಾಲ್ ಬಾರಿಕೆ, ಕೋಶಾಧಿಕಾರಿ ಶುಭಾಕರ ಕುಲಾಲ್, ಸದಸ್ಯರಾದ ಗಣೇಶ್ ಸಾಲ್ಯಾನ್ ದೋಳ, ಹರೀಶ್ ದೋಳ, ಬಾಳಪ್ಪ ಗೌಡ ಕೆದ್ಕಾರ್, ಮೋಹನ್ ಗೌಡ ಕೆದ್ಕಾರ್, ಭವೀಷ್ ವಿ ಸುವರ್ಣ, ಸುಧಾಕರ್ ಕುಲಾಲ್ ನಡುವಾಲ್, ಮಲ್ಲೇಶ್ ಬಾರಿಕೆ ಉಪಸ್ಥಿತರಿದ್ದರು.