Published
15 hours agoon
By
Akkare Newsಕಳೆದ 20 ದಿನಗಳ ಹಿಂದೆ ಪ್ರಕೃತಿ ವಿಕೋಪದಿಂದ ಅನೇಕ ಗ್ರಾಮ ಪಂಚಾಯಿತಿಗಳ ಬಹುತೇಕ ಮಾರ್ಗಗಳು, ಮನೆಗಳು, ಹಾನಿ ಗೀಡಾಗಿತ್ತು ಗ್ರಾಮ ಪಂಚಾಯತ್ ಮತ್ತು ಗ್ರಾಮ ಲೆಕ್ಕಾ ಅಧಿಕಾರಿಗಳು ಅಧಿಕಾರಿಗಳು ಮಾತ್ರ ಊರಿನಲ್ಲಿ ಕೆಲವೊಂದು ಕಡೆ ತಾಲೂಕ ಅಧಿಕಾರಿಗಳು ಭೇಟಿ ನೀಡಿದ್ದಾರೆ ಆದರೆ ಇನ್ನೂ ಕೂಡ ಪರಿಹಾರ ನೀಡಲು ಅಸಾಧ್ಯವಾದ ಜಿಲ್ಲಾಡಳಿತ…!! ಉದಾಹರಣೆಗೆ ಕೋಡಿಂಬಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೋಡಿಂಬಾಡಿ ಗ್ರಾಮ ಮತ್ತು ಬೆಳ್ಳಿ ಪಾಡಿ ಗ್ರಾಮಗಳಲ್ಲಿ ಭಾಗಸ ರಸ್ತೆಗಳು,ಮನೆಗಳು, ತೋಟಗಳು ಹಾನಿಯಾಗಿತ್ತು. ಗ್ರಾಮ ಪಂಚಾಯತಿಯಲ್ಲಿ ಆದಾಯವಿಲ್ಲದಿದ್ದರೂ,5 ಲಕ್ಷ ಕ್ಕೂ ಮಿಕ್ಕಿಯ ದುರಸ್ಥಿ ಕೆಲಸಗಳನ್ನು ಸಾಲ ಮಾಡಿ ಮಾಡಿರುತ್ತಾರೆ.
ಆದರೆ ತಾಲೂಕು ಅಧಿಕಾರಿಗಳು ಕೂಡ ಇದರ ಬಗ್ಗೆ ಗಮನ ಕೊಡಲಿಲ್ಲ. ಇನ್ನು ಕೂಡ ಯಾವುದೇ ಪರಿಹಾರ ಹಣವನ್ನು ಬಿಡುಗಡೆ ಮಾಡದೇ ಕುಳಿತುಕೊಂಡಿರುವುದು, ದುರಾದೃಷ್ಟಕರ.ಶಾಸಕರು 48 ಗಂಟೆಗಳಲ್ಲಿ ಪರಿಹಾರ ನೀಡುವ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದ್ದರು ಯಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಅಧಿಕಾರಿಗಳು ಕ್ಯಾರೇ ಅನ್ನದೇ ಕುಳಿತಿರುವುದು ಬಡ ಜನರ ಮೇಲೆ ಪೆಟ್ಟುಕೊಟ್ಟಂತಾಗಿದೆ. ಈಗ ಜನರ ಪ್ರಶ್ನೆ..ಬೆಕ್ಕಿಗೆ ಗಂಟೆ ಕಟ್ಟುವವರು ಯಾರು.. ಮತ್ತು ಈ ಪ್ರಶ್ನೆಗೆ ಉತ್ತರ ಕೊಡುವವರು ಆದರೂ ಯಾರು…?/? ಗ್ರಾಮ ಪಂಚಾಯತ್ ಗಳ ತೊಂದರೆಗಳನ್ನು ಆಲಿಸುವವರು ಆದರೂ ಯಾರು..???