Connect with us

ಇತರ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಪ್ರಮುಖ ಆರೋಪಿ ಅಬ್ದುಲ್ ರಹಿಮಾನ್ ವಿದೇಶದಿಂದ ಬಂದಿಳಿಯುದಂತೆಯೇ NIA ಬಲೆಗೆ

Published

on

ಮಂಗಳೂರು, ಜುಲೈ 05: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು  ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಅಬ್ದುಲ್ ರಹಿಮಾನ್ ಎಂಬಾತನನ್ನು ಶುಕ್ರವಾರ (ಜುಲೈ 04) ಕೇರಳದ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಅವನು ಕತಾರ್‌ನಿಂದ ವಾಪಸ್ಸಾಗಿ ಇಳಿಯುತ್ತಿದ್ದ ಸಮಯದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಘಟನೆಯ ಹಿನ್ನೆಲೆ

ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈ 26ರಂದು ಮಂಗಳೂರಿನ ಬೆಳ್ಳಾರೆ ಗ್ರಾಮದಲ್ಲಿ ತೀಕ್ಷ್ಣಾಸ್ತ್ರಗಳಿಂದ ಹತ್ಯೆ ಮಾಡಲಾಗಿತ್ತು. ಈ ಕೊಲೆಯ ಹಿಂದೆ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ಯ ಸದಸ್ಯರ ಭಾಗಿಯಾಗಿರುವುದನ್ನು ತನಿಖೆಯಲ್ಲಿ ಗೊತ್ತಾಗಿದೆ. ಈ ಘಟನೆಯು ಸಮಾಜದಲ್ಲಿ ಭಯ ಮತ್ತು ಸಾಮಾಜಿಕ ಅಶಾಂತಿಯನ್ನು ಸೃಷ್ಟಿಸುವ ದೊಡ್ಡ ಸಂಚಿನ ಭಾಗವಾಗಿತ್ತ ಎಂದು NIA ತಿಳಿಸಿದೆ. ಆರೋಪಿ ಅಬ್ದುಲ್ ರಹಿಮಾನ್ PFI ನಾಯಕರ ಸೂಚನೆಯ ಮೇರೆಗೆ ಮುಖ್ಯ ದಾಳಿಗಾರರಿಗೆ ಆತಿಥ್ಯವನ್ನು ಒದಗಿಸಿದ್ದು ಮತ್ತು ಕೊಲೆಯಲ್ಲಿ ಸಹಭಾಗಿಯಾಗಿದ್ದ ಇತರರಿಗೆ ಸಹಾಯ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ.


ಬಂಧನದ ವಿವರ

ಅಬ್ದುಲ್ ರಹಿಮಾನ್ ಈ ಪ್ರಕರಣದ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ಕತಾರ್‌ಗೆ ಪಲಾಯನ ಮಾಡಿದ್ದನು. ಎರಡು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಈ ಆರೋಪಿಯ ಮೇಲೆ NIA ರೂ. 4 ಲಕ್ಷ ಬಹುಮಾನ ಘೋಷಿಸಿತ್ತು. ಈ ಘೋಷಣೆಯ ನಂತರ, ಅವನು ಕತಾರ್‌ನಿಂದ ವಾಪಸ್ಸಾಗುತ್ತಿದ್ದ ಸಮಯದಲ್ಲಿ NIA ತಂಡವು ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಲೆ ಬೀಸಿ ಬಂಧಿಸಿದೆ. ಈ ಪ್ರಕರಣದಲ್ಲಿ ಒಟ್ಟು 28 ಜನರ ವಿರುದ್ದ ಚಾರ್ಜ್‌ಶೀಟ್ ದಾಖಲಾಗಿದ್ದು, ಇದರಲ್ಲಿ ಮೂವರು ಇತರ ಆರೋಪಿಗಳು ಇನ್ನೂ ತಲೆಮರೆಯುತ್ತಿದ್ದಾರೆ.

NIA ತನಿಖೆ ಮತ್ತು ಮುಂದಿನ ಕ್ರಮ

NIA ಈ ಪ್ರಕರಣವನ್ನು 2022ರ ಆಗಸ್ಟ್ 4ರಂದು ತನ್ನ ವಶಕ್ಕೆ ಪಡೆದು ತೀವ್ರ ತನಿಖೆಯಲ್ಲಿ ತೊಡಗಿದೆ. ತನಿಖೆಯಲ್ಲಿ ತಿಳಿದಂತೆ, PFIಯು ಗುರಿ ಆರಿಸಿ ಕೊಲೆ ಮಾಡುವ ಸಲುವಾಗಿ ‘ಕಿಲ್ಲರ್ ಸ್ಕ್ವಾಡ್‌’ಗಳನ್ನು ರಚಿಸಿತ್ತು. ಈ ಘಟನೆಯು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸಾಮಾಜಿಕ ಅಶಾಂತಿಯನ್ನು ಉಂಟುಮಾಡಿದ್ದು, ಪ್ರತೀಕಾರ ಕೊಲೆಗಳ ಸರಣಿಗೆ ಕಾರಣವಾಗಿತ್ತು. NIA ಇನ್ನೂ ಉಳಿದಿರುವ ಆರೋಪಿಗಳನ್ನು ಪತ್ತೆಹಚ್ಚಲು ಮತ್ತು ಸಂಪೂರ್ಣ ಸಂಚು ಬಯಲಿಗೆ ತರುವ ಉದ್ದೇಶದಿಂದ ತನಿಖೆಯನ್ನು ಮುಂದುವರೆಸಿದೆ.


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version