Published
7 months agoon
By
Akkare News
ಧರ್ಮಸ್ಥಳ: 1995 ರಿಂದ 2014ರ ಅವಧಿಯಲ್ಲಿ ನಡೆದಿದೆ ಎನ್ನಲಾದ ಬಹುಸಂಖ್ಯೆಯ ಮೃತದೇಹಗಳ ಗುಪ್ತ ಸಮಾಧಿ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ, ವಿಶೇಷ ತನಿಖಾ ದಳದ (ಎಸ್.ಐ.ಟಿ) ಇನ್ಸ್ಪೆಕ್ಟರ್ ಸಂಪತ್ ಧರ್ಮಸ್ಥಳ ಗ್ರಾಮ ಪಂಚಾಯತ್ಗೆ ಇಂದು (ಆಗಸ್ಟ್ 6) ಭೇಟಿ ನೀಡಿ, ಆ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಗ್ರಾಮ ಪಂಚಾಯತ್ ಅಧಿಕಾರಿಗಳ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಇನ್ಸ್ಪೆಕ್ಟರ್ ಸಂಪತ್ ಅವರು ಗ್ರಾಮ ಪಂಚಾಯತ್ನಿಂದ ಸಂಗ್ರಹಿಸಿದ ದಾಖಲೆಗಳು, ಆ ಅವಧಿಯಲ್ಲಿ ಗ್ರಾಮ ಪಂಚಾಯತ್ನಲ್ಲಿ ಕಾರ್ಯನಿರ್ವಹಿಸಿದ್ದ ಅಧಿಕಾರಿಗಳ ವಿವರಗಳು ಮತ್ತು ಅಸಹಜ ಸಾವಿನ (ಯುಡಿಆರ್) ದಾಖಲೆಗಳನ್ನು ಒಳಗೊಂಡಿವೆ. ಈ ದಾಖಲೆಗಳು ದೂರುದಾರನ ಆರೋಪಗಳ ದೃಢೀಕರಣಕ್ಕೆ ಮತ್ತು ತನಿಖೆಯಲ್ಲಿ ಮಹತ್ವದ ಸುಳಿವುಗಳನ್ನು ಒದಗಿಸಲಿವೆ ಎಂದು ತನಿಖಾ ತಂಡ ಭಾವಿಸಿದೆ.