Connect with us

ಇತರ

ಕೆಂಪುಕಲ್ಲು ಸಮಸ್ಯೆ : ಜೀವನಕ್ಕೆ ಅಡ್ಡದಾರಿ ಹಿಡಿದು ಕಳ್ಳತನ ಮಾಡಿದ ದಯಾನಂದ ನಾಯ್ಕ ಬಂಧನ

Published

on

ಪುತ್ತೂರು: ಆ.12ರಂದು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳದ ಮನೆಯೊಂದರಲ್ಲಿ ನಡೆದ, ಸುಮಾರು 31 ಗ್ರಾಂ ಬಂಗಾರ ಮತ್ತು ರೂ.5000/- ನಗದು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ಈಶ್ವರಮಂಗಲದಲ್ಲಿ ಪೊಲೀಸರು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ನೆಟ್ಟಣಿಗೆ ಮುಡೂರು ಗ್ರಾಮದ ನಿವಾಸಿ ದಯಾನಂದ್ ನಾಯ್ಕ ಎಂ (29) ಎಂದು ಗುರುತಿಸಲಾಗಿದೆ.

ಊರಿನಲ್ಲಿ ತಾನಾಯಿತು ತನ್ನ ಕೆಲಸವಾಯಿತು ಯಾರ ತಂಟೆ ತಕರಾರಿಗೆ ಹೋಗದ ಕೆಂಪು ಕಲ್ಲು ಲೋಡಿಂಗ್ ನ್ನು ತನ್ನ ಕಾಯಕವಾಗಿ ನಂಬಿದ್ದ ದಯಾನಂದ ಕೆಲವು ಸಮಯದಿಂದ ಕೆಂಪು ಕಲ್ಲು ಕೆಲಸ ಇಲ್ಲದ ಕಾರಣ ತನ್ನ ಮನೆ ಖರ್ಚು, ಬ್ಯಾಂಕ್ ಲೋನ್ ಕಟ್ಟಲು ಸಾಧ್ಯವಾಗದೆ ಬೇರೆ ವಿದಿಯಿಲ್ಲದೆ ಕಳ್ಳತನ ಮಾಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಆರೋಪಿಯಿಂದ 30.120 ಗ್ರಾಂ ಬಂಗಾರ ಮತ್ತು ಪ್ರಕರಣಕ್ಕೆ ಉಪಯೋಗಿಸಿದ ಡಿಸ್ಕವರಿ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version