Published
6 months agoon
By
Akkare News
ಕರಾವಳಿಯ ದೇವಸ್ಥಾನಗಳಾದ ಕಟೀಲು ದುರ್ಗಾಪರಮೇಶ್ವರಿ ದೇವಾಲಯ ಮತ್ತು ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಬಹಳ ಮಂದಿ ಭಕ್ತರು ಭೇಟಿ ನೀಡುತ್ತಾರೆ. ಇದೀಗ ದೇವಾಲಯಗಳ ಸೇವಾ ದರದಲ್ಲಿ ಹೆಚ್ಚಳವಾಗಿದೆ. ಧಾರ್ಮಿಕ ದತ್ತಿ ಇಲಾಖೆಯಡಿ ಬರುವ ದೇವಸ್ಥಾನಗಳ ಸೇವಾ ದರದಲ್ಲಿ ಹೆಚ್ಚಳವಾಗಿದ್ದು, ಇನ್ಮೇಲೆ ದೇವರ ಸೇವಾದರ ಭಾರೀ ಏರಿಕೆಯಾಗಲಿದೆ.
ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ 120 ರೂ. ಇದ್ದ ಪುಷ್ಪಾರ್ಚನೆ ಸೇವೆ 220 ರೂ. ಆಗಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಅಶ್ಲೇಷ ಪೂಜೆ ಸೇವೆಗೆ ಈ ಹಿಂದೆ ಇದ್ದ ದರ ರೂ.400. ಆದರೆ ಇದೀಗ ಪರಿಷ್ಕೃತ ದರ ರೂ.500 ಆಗಿದೆ. ನಾಗಪ್ರತಿಷ್ಠೆಗೆ ಈ ಹಿಂದೆ ಇದ್ದ ದರ ರೂ.400, ಪರಿಷ್ಕೃತ ದರ ರೂ.500 ಆಗಿದೆ. ಉಳಿದ ಸೇವೆಗಳಲ್ಲೂ ಭಾರೀ ಹೆಚ್ಚಳ ಆಗಿದೆ.