Published
5 months agoon
By
Akkare News
ರಾಜಕೀಯ ರಹಿತ ಕಾರ್ಯಕ್ರಮ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಿ : ಟ್ರಸ್ಟ್ ಮಾಧ್ಯಮ ಮುಖ್ಯಸ್ಥರಾದ ಕೃಷ್ಣ ಪ್ರಸಾದ್ ಬೊಳ್ಳಾವು
ಪುತ್ತೂರು: 07.ಅಶೋಕ ಜನಮನ 2025 ವಸ್ತ್ರವಿತರಣೆ ಕಾರ್ಯಕ್ರಮದ ಪ್ರಚಾರ ಸಭೆಯು ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರ್ ಅಂಬೇಡ್ಕರ್ ಭವನದಲ್ಲಿ ಇಂದು ನಡೆಯಿತು.
ಟ್ರಸ್ಟ್ ಮಾಧ್ಯಮ ಮುಖ್ಯಸ್ಥರಾದ ಕೃಷ್ಣ ಪ್ರಸಾದ್ ಬೊಳ್ಳಾವು ಮಾತನಾಡಿ ಶಾಸಕರಾದ ಅಶೋಕ್ ಕುಮಾರ್ ರೈ ಅವರ ಸಾರಥ್ಯದಲ್ಲಿ ನಡೆಯುವ ದೀಪಾವಳಿಯ ದಿನದಂದು ವಸ್ತ್ರ ವಿತರಣೆ ಸಹ ಭೋಜನ ನಡೆಯಲಿದೆ ಸರಿಸುಮಾರು ಈ ಕಾರ್ಯಕ್ರಮಕ್ಕೆ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಇದೆ ಮಧ್ಯಾಹ್ನ ಊಟ 3:00 ನಂತರ ದೋಸೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.ತಾವೆಲ್ಲರೂ ಭಾಗವಹಿಸಿ. ಈ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಗ್ರಾಮಸ್ಥರಿಗೆ ಆಮಂತ್ರಣ ನೀಡಿದರು.
ಈ ಸಂದರ್ಭದಲ್ಲಿ ಸೋಮನಾಥ್ , ಮಹಾಲಿಂಗ ಕಜೆಕ್ಕಾರ್ , ರವಿ ಉಪ್ಪಿನಂಗಡಿ, ಆದಂ ಕೊಪ್ಪಳ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.