ಪುತ್ತೂರು.10: ಶಾಸಕರ ವರ್ಷದ ದೀಪಾವಳಿ ಕಾರ್ಯಕ್ರಮವಾದ ಅಶೋಕ ಜನಮನ 2025 ಇದರ ಪೂರ್ವಭಾವಿ ಸಭೆಯು 10 ರಂದು ಸಂಜೆ ಸೆಟ್ಲಪಾಲ್ ರವಿ.ಎನ್ ಅವರ ಮನೆಯಲ್ಲಿ ಜರಗಿತು ಹಲವಾರು ಮಂದಿ ಭಾಗವಹಿಸಿದರು ಸಭೆಯಲ್ಲಿ ಪಂಚಾಯತ್ ಸದಸ್ಯರು ಗಳಾದ ಗೀತಾ ದಾಸರಮೂಲೆ, ಸತೀಶ್ ಶೆಟ್ಟಿ ಹೆನ್ನಾಳ,ಭವಾನಿ ಮುರದಮೇಲು. ವಲಯ ಕಾಂಗ್ರೆಸ್ ಅಧ್ಯಕ್ಷರು ರವಿ ಪಟಾರ್ತಿ, ಕಾಂಗ್ರೆಸ್ ಬೂತ್ ಅಧ್ಯಕ್ಷರು ಝಕಾರಿಯಾ ನಾಗನಕೋಡಿ ಉಪಸ್ಥಿತರಿದ್ದರು, ಟ್ರಸ್ಟಿನ ಮಾಧ್ಯಮ ಪ್ರಮುಖರಾದ ಕೃಷ್ಣಪ್ರಸಾದ್ ಬೊಲ್ಲಾವು ಮಾತನಾಡಿ ವರ್ಷ ಪ್ರತಿ ನಡೆಯುವ ಕಾರ್ಯಕ್ರಮ. ದೀಪಾವಳಿ ಪ್ರಯುಕ್ತ ನಡೆಯುವ ವಸ್ತ್ರ ವಿತರಣೆ ಸಹ ಭೋಜನ ಮತ್ತು ಮಧ್ಯಾಹ್ನದ ನಂತರ ದೋಸೆ ಮೇಳ ನಡೆಯಲಿದೆ.20ರಂದು ನಡೆಯುವ ಕಾರ್ಯಕ್ರಮದ ಬಗ್ಗೆ ಮಾಹಿತಿ ತಿಳಿಸಿ ಗ್ರಾಮದ ಪ್ರತಿಯೊಬ್ಬರು ಭಾಗವಹಿಸಬೇಕಾಗಿ ತಿಳಿಸಿದರು.
ಈ ಸಭೆಯಲ್ಲಿ ಟ್ರಸ್ಟಿನ ಮಹಾಲಿಂಗ ಮತ್ತು ಗ್ರಾಮದ ಮುಖ್ಯಸ್ಥರಾದ ಗಂಗಾಧರ್ ಎಲಿಯಾ,ರಾಜೀವ ಸೆಟ್ಲಪಾಲ್, ಮೊಯಿದ್ದಿನ್ ಅಡೆಕ್ಕಲ್, ಮೊಂಟ ಮುಗೇರ ಸೆಟ್ಲಪಾಲ್ ಹಾಗೆ ಹಲವಾರು ಗ್ರಾಮಸ್ಥರು ಭಾಗವಹಿಸಿದರು.