Published
2 months agoon
By
Akkare News
ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿರುವ ಟೀಮ್ ಮಂಗಳೂರು ತಂಡದಿಂದ ಸಾಂಸ್ಕೃತಿಕ ಗಾಳಿಪಟಗಳ ಜತೆಗೆ ವಿಶೇಷವಾಗಿ ತುಳುನಾಡಿನ ಸಾಂಸ್ಕೃತಿಕ ವೈಭವ ಪ್ರತಿಬಿಂಬಿಸುವ ರಥ ಎಂಬ ಹೊಸ ಗಾಳಿಪಟವನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.
ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಮಾತನಾಡಿ, ಬೀಚ್ನ 2 ಕಿ.ಮೀ. ಅಂತರದಲ್ಲಿ 10 ಕಡೆ 1900 ಕಾರುಗಳಿಗೆ ಹಾಗೂ ನಾಲ್ಕು ಕಡೆ ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಸುಲ್ತಾನ್ ಬತ್ತೇರಿಯಿಂದ ಫಲ್ಗುಣಿ ನದಿ ಮೂಲಕ ಫೆರಿ ಸೇವೆಯ ಸೌಲಭ್ಯ ಪಡೆದು ತಣ್ಣೀರುಬಾವಿ ಬೀಚ್ಗೆ ಆಗಮಿಸಬಹುದು. ಕೆಐಒಸಿಎಲ್ ವೃತ್ತದಿಂದ ಬ್ಲೂಬೇ ಬೀಚ್ಗೆ ಬಸ್ ಮೂಲಕ ಪಿಕಪ್ ಮತ್ತು ಡ್ರಾಪ್ ವ್ಯವಸ್ಥೆ ಇರಲಿದೆ ಎಂದು ಅವರು ಹೇಳಿದರು.
1995ರಲ್ಲಿ ಸ್ಥಾಪಿತವಾದ ಟೀಮ್ ಮಂಗಳೂರು ಗಾಳಿಪಟ ಹಾರಾಟವನ್ನು ಕಲೆಯಾಗಿ ರೂಪಿಸಿಕೊಂಡು ಬಂದಿದೆ. ಎಂಆರ್ಪಿಎಲ್, ಒಎನ್ಜಿಸಿ ಮತ್ತು ಇತರ ಖಾಸಗಿ ಸಂಸ್ಥೆಗಳ ಪ್ರಾಯೋಜಕತ್ವ ಜಿಲ್ಲಾಡಳಿತದ ಸಹಕಾರ ದೊಂದಿಗೆ ಗಾಳಿಪಟ ಉತ್ಸವ ಸಾರ್ವಜನಿಕರಿಗೆ ಮನರಂಜನೆ ನೀಡಲಿದೆ ಎಂದು ಟೀಮ್ ಮಂಗಳೂರು ತಂಡದ ಪ್ರಾಣ್, ಪ್ರಶಾಂತ್, ದಿನೇಶ್ ಹೊಳ್ಳ ಹಾಗೂ ಇತರರು ಮಾಹಿತಿ ನೀಡಿದರು.