Connect with us

ಕ್ರೈಮ್ ನ್ಯೂಸ್

ಮಂಗಳೂರಿನಲ್ಲಿ ಸಿನಿಮೀಯ ಮಾದರಿ ಹೆದ್ದಾರಿ ದರೋಡೆ: ಕೇರಳ ಉದ್ಯಮಿ ಕಾರು ಅಡ್ಡಗಟ್ಟಿ ನಡುರಸ್ತೆಯಲ್ಲಿ ಚಿನ್ನಾಭರಣ ದೋಚಿ ಕಾರಿನೊಂದಿಗೆ ದರೋಡೆಕೋರರು ಪರಾರಿ!

Published

on

ಮಂಗಳೂರು (ಜೂ.29): ಚಿನ್ನದ  ಬೆಲೆ ಹೆಚ್ಚುತ್ತಿರುವಾಗಲೇ ಜನರು ಚಿನ್ನ ಹಾಕಿಕೊಂಡು ಓಡಾಡೋದು ಕಷ್ಟ ಕಷ್ಟ ಆಗುತ್ತಿದೆ. ಇದರ ನಡುವೆ ಮಂಗಳೂರಿನಲ್ಲಿ ಕೇರಳದ  ಚಿನ್ನದ ವ್ಯಾಪಾರಿಯನ್ನೇ ದರೋಡೆ ಮಾಡಿರೋ ಘಟನೆ ನಡೆದಿದೆ. ಸುರತ್ಕಲ್ ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಕಾರು ತಡೆದು ಸಿನಿಮೀಯ ರೀತಿಯಲ್ಲೇ ಚಿನ್ನದ ವ್ಯಾಪಾರಿಯ ದರೋಡೆ ನಡೆದಿದೆ ಎಂದು ವರದಿ ಆಗಿದೆ..

3 ಕಾರಿನಲ್ಲಿ ಬಂದು ದರೋಡೆ

ಎರಡು ಇನೋವಾ, ಒಂದು ಸ್ವಿಫ್ಟ್ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ, ಸುರತ್ಕಲ್ ಬಳಿಯ ಬೈಕಂಪಾಡಿ ಹೆದ್ದಾರಿಯಲ್ಲಿ ಚಿನ್ನದ ವ್ಯಾಪಾರಿಯನ್ನ ಅಡ್ಡಗಟ್ಟಿದ್ದಾರೆ. ಪಯ್ಯನ್ನೂರು ನಿವಾಸಿ, ವ್ಯಾಪಾರಿ ವಿಕಾಸ್ ಎಂಬುವವರು ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಮದುವೆ ಸಮಾರಂಭ ಒಂದರಲ್ಲಿ ಪಾಲ್ಗೊಂಡು ಹಿಂತಿರುಗುತ್ತಿದ್ದ ಈ ಘಟನೆ ಸಂಭವಿಸಿದೆ.

ಕಾರಿನಿಂದ ಕೆಳಗಿಳಿಸಿ ಕಾರಿನ ಸಮೇತ ಎಸ್ಕೇಪ್​

ಸ್ವಿಫ್ಟ್ ಕಾರಿನಲ್ಲಿ ಉಡುಪಿ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದಾಗ ಬೈಕಂಪಾಡಿಯಲ್ಲಿ ಅಡ್ಡಗಟ್ಟಿದ ಕಿಡಿಗೇಡಿಗಳು, ಇಂದು ನಸುಕಿನ ನಾಲ್ಕು ಗಂಟೆ ವೇಳೆಗೆ ಹೊಂಚು ಹಾಕಿಕೊಂಡು ದರೋಡೆ ಮಾಡಿದ್ದಾರೆ. ಬೈಕಂಪಾಡಿ ದ್ವಾರದ ಬಳಿ ಅಡ್ಡಗಟ್ಟಿದ ತಂಡ ಬಳಿಕ ವ್ಯಾಪಾರಿ ವಿಕಾಸ್ ಅವರನ್ನು ಇಳಿಸಿ ಕಾರನ್ನು ಅಪಹರಿಸಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version