Published
2 years agoon
By
Akkare News
ಉಪ್ಪಿನಂಗಡಿ:ಏ2,ಭಾರತೀಯ ಭೂ ಸೇನೆಯಲ್ಲಿ 20ವರ್ಷಗಳ ಸೇವೆಸಲ್ಲಿಸಿ ಇದೀಗ ಹುಟ್ಟುರಿಗೆ ಆಗಮಿಸಿದ, ಬೆಳ್ತಂಗಡಿ ತಾಲೂಕಿನ ಪಿಲಿಗೂಡು ಗ್ರಾಮದ,ಪೆಲತ್ತಾಜೆ ನಿವಾಸಿ, ದಿ. ಜನಾರ್ಧನ ಪೂಜಾರಿ ಅಪ್ಪಿ ಯವರ ಪುತ್ರ ಹವಾಲ್ದಾರ್ ಜಯಾನಂದ ಪೂಜಾರಿ ಯವರಿಗೆ ಗ್ರಾಮಸ್ಥರಿಂದ ಉಪ್ಪಿನಂಗಡಿ ಯಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.
ನಂತರ ವಾಹನ ಜಾಥಾ ಮೂಲಕ ಸ್ವಗ್ರಾಮಕ್ಕೆ ಹೋಗಲಾಯಿತು. ಈ ಸಂದರ್ಭದಲ್ಲಿ ಯುವ ಉದ್ಯಮಿ ನಟೇಶ್ ಪೂಜಾರಿ ಪೆರಿಯಡ್ಕ ಸಹಿತ ಅನೇಕ ಮಂದಿ ಉಪಸ್ಥಿತರಿದ್ದರು