ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇಂದಿನ ಕಾರ್ಯಕ್ರಮ

ಗಾಂಧೀಕಟ್ಟೆಯಲ್ಲಿ ಸ್ವಾತಂತ್ರೋತ್ಸವ, ನಶೆ ಮುಕ್ತ ಭಾರತ ಸಂದೇಶ

Published

on

ಪುತ್ತೂರು: ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿಯಿರುವ ಐತಿಹಾಸಿಕ ಗಾಂಧೀಕಟ್ಟೆಯಲ್ಲಿ ದೇಶದ 78ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.

 

ಶಾಸಕ ಅಶೋಕ್‌ ಕುಮಾರ್ ರೈ ಧ್ವಜಾರೋಹಣ ನೆರವೇರಿಸಿ, ನಶೆ ಮುಕ್ತ ಭಾರತ ಸಂದೇಶ ನೀಡಿದರು.

 

 

ನಂತರ ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ತಹಶಿಲ್ದಾರ್ ಪುರಂದರ, ಪೌರಾಯುಕ್ತ ಮಧು ಎಸ್ ಮನೋಹರ್, ಡಿವೈಎಸ್ಪಿ ಅರುಣ್ ನಾಗೇ ಗೌಡ, ನಗರ ಠಾಣಾ ನಿರೀಕ್ಷಕ ಸತೀಶ್, ಸಂಚಾರಿ ಠಾಣಾ ಎಸ್.ಐ ಉದಯ ರವಿ ಗಾಂಧೀ ಪ್ರತಿಮೆಗೆ ಹಾರಾರ್ಪಣೆ ಮಾಡಿದರು.

ಮೊಹಾಪಾತ್ರರವರ ಪತ್ನಿ ಶಿಖಾ, ಗಾಂಧೀಕಟ್ಟೆ ಸಮಿತಿಯ ನಾರಾಯಣ ರೈ ಕುಕ್ಕುವಳ್ಳಿ, ಶಿವರಾಮ ಆಳ್ವ, ಸಯ್ಯದ್ ಕಮಲ್, ಸಯ್ಯದ್ ಕಮಲ್, ಗಿರಿಧರ ಸಂಪ್ಯ, ಸಾಹಿರಾ ಬಾನು, ದಾಮೋದರ ಭಂಡಾರ್ ಕರ್, ಕಾರ್ತಿಕ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.

ಗಾಂಧೀಕಟ್ಟೆ ಸಮಿತಿ ಸಂಚಾಲಕ ಕೃಷ್ಣಪ್ರಸಾದ್‌ ಆಳ್ವ ಸ್ವಾಗತಿಸಿ, ಪುರಸಭಾ ಮಾಜಿ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ವಂದಿಸಿದರು.

 


 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version