Published
1 year agoon
By
Akkare News
ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಗೆ ಕೆ.ಪಿ.ಸಿ.ಸಿ ಯ ಪ್ರಧಾನ ಕಾರ್ಯದರ್ಶಿಗಳೂ ಮತ್ತು ಕೆ.ಪಿ.ಸಿ.ಸಿ ಸಾಮಾಜಿಕ ಜಾಲತಾಣದ ಸಂಯೋಜಕರೂ ಆದ ಶ್ರೀ ನಿಕೇತ್ ರಾಜ್ ಮೌರ್ಯ ರವರು ಭೇಟಿ ನೀಡಿ ದಕ್ಷಿಣ ಕನ್ನಡದಲ್ಲಿ ಸಾಮಾಜಿಕ ಜಾಲತಾಣ ಬಲಿಷ್ಠಗೊಳ್ಳಬೇಕಾಗಿದೆ, ಇದಕ್ಕೋಸ್ಕರ ಬಲಿಷ್ಠ ತಂಡದ ಅಗತ್ಯವಿದೆ, ಅಂತೆಯೇ ಬ್ಲಾಕ್ ಅಧ್ಯಕ್ಷರಾದ ಕೃಷ್ಣಪ್ರಸಾದ್ ಆಳ್ವರವರ ನೇತೃತ್ವದಲ್ಲಿ ಹೊಸ ತಂಡ ರಚನೆಗೊಳ್ಳಬೇಕು ಎಂಬ ಸಲಹೆ ನೀಡಿದ್ದಾರೆ. ಸ್ವಾಗತವನ್ನು ಕೃಷ್ಣಪ್ರಸಾದ್ ಅಳ್ವರವರು ಮಾಡಿ , ರವಿಪ್ರಸಾದ್ ಶೆಟ್ಟಿ ಯವರು ವಂದನಾರ್ಪಣೆ ಮಾಡಿದರು.