Published
1 year agoon
By
Akkare News
ಪುತ್ತೂರು: ಜ.25.ಮುಂಡೂರು ಗ್ರಾಮದ ನರಿಮೊಗರು ನಲ್ಲಿ ಪ್ರತಿ ದಿನ ಅಪಘಾತ ಆಗುತ್ತಿರುವ ಸ್ಥಳವನ್ನು ಗುರುತಿಸಿ ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಮತ್ತು ಮನು ಎಂ ರೈ ನಂದಾದೀಪ ರವರು. ಜನಪ್ರಿಯ ಶಾಸಕರಾದ ಅಶೋಕ್ ಕುಮಾರ್ ರೈರವರ ಗಮನಕ್ಕೆ ತಂದು ಶಾಸಕರ ಸೂಚನೆಯಂತೆ ವಾಹನ ಸವಾರರ ಮತ್ತು ಶಾಲಾ ಮಕ್ಕಳ ಹಿತದೃಷ್ಟಿ ಇಂದ ಇವರ ಮನವಿಗೆ ಸ್ಪಂದಿಸಿ ಸ್ಪೀಡ್ ಬ್ರೇಕರ್ ವೈಟ್ ರೆಡಿಯಂ ಹಂಪ್ಸ್ ಅನ್ನು ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿ ತಾರೀಕು 25ರಂದು ರಾತ್ರಿ ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮುಂಡೂರು ವಲಯ ಅಧ್ಯಕ್ಷ ಪ್ರವೀಣ್ ಆಚಾರ್ಯ ನರಿಮೊಗರು ಇವರ ಸಹಕಾರದೊಂದಿಗೆ ಅಳವಡಿಕೆ ಕೆಲಸವನ್ನು ಮಾಡಿದರು
ಇದಕ್ಕೆ ಸಹಕರಿಸಿದ ಅಧಿಕಾರಿಗಳಾದ ಕಾಣಿಸ್ಕ ಚಂದ್ರ ಮತ್ತು A.E.E ರಾಜೇಶ್ ರೈ ಯಾವರಿಗೆ ಹಾಗೂ ಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರವೀಣ್ ಆಚಾರ್ಯ ಮನು ಎಂ ರೈ ಕಾರ್ಯಕ್ಕೆ ಸಾರ್ವಜನಿಕರಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ