Published
11 months agoon
By
Akkare News
ಪುತ್ತೂರು: ನಾವು ನಿತ್ಯ ಬಳಸುವ ವಸ್ತುಗಳಿಂದ ಹಿಡಿದು ಡೀಸೆಲ್,ಪೆಟ್ರೋಲ್, ಗ್ಯಾಸ್ ಇದೆಲ್ಲದರ ಬೆಲೆಯನ್ನು ನಿಗದಿ ಮಾಡುವುದು ಕೇಂದ್ರ ಸರಕಾರ. ಸದ್ಯ ಇವೆಲ್ಲವುಗಳ ಬೆಲೆ ಏರಿಕೆಯಾಗಿದ್ದು ಇದಕ್ಕೆ ಕೇಂದ್ರ ಸರಕಾರವೇ ಹೊಣೆಯಾಗಿದೆ. ಆದರೆ ಬಿಜೆಪಿ ಇದನ್ನು ಕಾಂಗ್ರೆಸ್ ಸರಕಾರದ ತಲೆಗೆ ಹಾಕುವ ಕೆಲಸ ಮಾಡುತ್ತಿದೆ ಎಂದು ಪುತ್ತೂರು ಶಾಸಕ ಅಶೋಕ್ ರೈ ಹೇಳಿದ್ದಾರೆ.
ಅವರು ಬನ್ನೂರಿನಲ್ಲಿ ಶಾಸಕರ ಅನುದಾನದಲ್ಲಿ ನೂತನವಾಗಿ ನಿರ್ಮಾಣವಾದ ರಿಕ್ಷಾ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು.
ಬೆಲೆ ಏರಿಕೆ ಮಾಡಿದವರು ಯಾರು ಎಂದು ಜನ ಸಾಮಾನ್ಯನಿಗೂ ಗೊತ್ತಿದೆ. ಯುವ ಜನತೆ ಈಗ ಸೋಶಿಯಲ್ ಮೀಡಿಯಾ ಬಳಕೆ ಮಾಡುತ್ತಾರೆ. ದೇಶದಲ್ಲಿ ಜಗತ್ತಿನಲ್ಲಿ ನಡೆಯುವ ಪ್ರತೀಯೊಂದು ವಿದ್ಯಮಾನಗಳು ಗೊತ್ತಾಗುತ್ತದೆ. ಯಾರು ಏನು ಮಾಡುತ್ತಾರೆ, ಏನು ಹೇಳುತ್ತಾರೆ ಎಲ್ಲವೂ ಜನರಿಗೆ ಗೊತ್ತಿದೆ. ಮೊದಲಿನ ಹಾಗೆ ಜನರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಅಶೋಕ್ ರೈ ಹೇಳಿದ್ದಾರೆ.