Connect with us

ಇಂದಿನ ಕಾರ್ಯಕ್ರಮ

ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆ ಮಳೆಹಾನಿಯಿಂದಾದ ಅನಾಹುತ ನನಗೆ ಗೊತ್ತಿದೆ ,ನೊಂದವರಿಗೆ ಪರಿಹಾರವನ್ನೂ ಸರಕಾರದಿಂದ ಕೊಡಿಸುವೆ: ಶಾಸಕ ಅಶೋಕ್ ರೈ

Published

on

ಪುತ್ತೂರು: ಭಾರೀ ಮಾಳೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮಳೆಯಿಂದ ಉಂಟಾದ ಅನಾಹುತದ ಬಗ್ಗೆ ನನಗೆ ಗೊತ್ತಿದೆ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ ನೊಂದವರಿಗೆ ಪರಿಹಾರವನ್ನೂ ಸರಕಾರ ಕೊಡಿಸುವಲ್ಲಿ ಕ್ರಮ ಕೈಗೊಳ್ಳಲಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.

ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ಲಾಕ್ ಮಟ್ಡದ ಸಭೆಯಲ್ಲಿ ಮಾತನಾಡಿದರು.
ನಾನು ಘಟನೆ ನಡೆದ ಸ್ಥಳಗಳಿಗೆ ಭೇಟಿ ನೀಡಿ ರಾಜಕೀಯ ಮಾಡಿಲ್ಲ, ಎಲ್ಲೆಲ್ಲಾ ನಷ್ಟವಾಗಿದೆ ಎಂದು ಗ್ರಾಮ ಮಟ್ಟದಿಂದ ವರದಿಯನ್ನು ಪಡೆದು ಆ ವರದಿಯನ್ನು ಸರಕಾರಕ್ಕೆ ಸಲ್ಲಿಸಿದ್ದೇನೆ. ಸರಕಾರದಿಂದ ಸೂಕ್ತ ಸ್ಪಂದನೆಯೂ ದೊರಕಿದೆ. ಮನೆ ಹಾನಿಯಾದವರಿಗೆ 1.25 ಲಕ್ಷ, ಭಾಗಶ ಹಾನಿಯಾದರೆ 50 ಸಾವಿರ ಹಾಗೂ ಉಳಿದಂತೆ 10 ಸಾವಿರ ತಕ್ಷಣದ ಪರಿಹಾರ ನೀಡಲಿದೆ. ನಾನು ಭೇಟಿ ಮಾಡಿದ್ದು ರಾಜಕೀಯ ಮಾಡುವುದಕ್ಕಲ್ಲ ನೊಂದವರಿಗೆ ಸಹಾಯ ಮಾಡುವುದಕ್ಕೋಸ್ಕರವಾಗಿದೆ ಎಂದು ಹೇಳಿದರು.

 

ಎಲ್ಲರಿಗೂ ನ್ಯಾಯ ಕೊಡಿಸಲು ಸಿದ್ದ
ಪಕ್ಷದಲ್ಲಿ ಎಲ್ಲರಿಗೂ ಸ್ಥಾನ ಮಾನ ಕೊಡಲು ಸಾಧ್ಯವಿಲ್ಲ, ಆದರೆ ಪಕ್ಷಕ್ಕೆ ಪ್ರತೀಯೊಬ್ಬ ತಳ ಮಟ್ಡದ ಕಾರ್ಯಕರ್ತನೂ ಪ್ರಮುಖರೇ ಆಗಿದ್ದಾರೆ. ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಗೌರವಿಸುವ ಕೆಲಸ ಮಾಡುತ್ತಿದ್ದೇನೆ, ಬೂತಲ್ಲಿ ಕೇಳದೆ ಒಂದೇ ಒಂದು ಅನುದಾನ ಅರ್ಜಿಗೆ ಸಹಿ ಹಾಕುವುದೇ ಇಲ್ಲ. ಕಾರ್ಯಕರ್ತರೇ ನಮಗೆ ಜೀವಾಳವಾಗಿದ್ದಾರೆ. ಸರಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತ ಮಾಡಬೇಕು. ಪಕ್ಷ ಗಟ್ಟಿಯಾದರೆ ಪ್ರತೀ ಕಾರ್ಯಕರ್ತರಿಗೂ ಗೌರವ ದೊರೆಯುತ್ತದೆ ಎಂದು ಶಾಸಕರು ಹೇಳಿದರು.

 

ಒಂದೇ ದಿನ ಕೋಟಿಗಟ್ಟಲೆ ಅನುದಾನಕ್ಕೆ ಶಿಲಾನ್ಯಾಸ:

ಪುತ್ತೂರಿನ ನ್ಯಾಯಾಲಯ ಕಟ್ಟಡ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪುತ್ತೂರಿಗೆ ಬರಲಿದ್ದು ಅದೇ ದಿನ ಆರ್ ಟಿ ಒ ಟ್ರ್ಯಾಕ್, ತಾಲೂಕು ಕ್ರೀಡಾಂಗಣ,ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ 350 ಕೋಟಿ ರೂ ಕಾಮಗಾರಿ ಸೇರಿದಂತೆ ಹತ್ತು ಹಲವು ಕಾಮಗಾರಿಗೆ ಸಿದ್ದರಾಮಯ್ಯ ಹಾಗೂ ಡಿಕೆಶಿಯವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶಾಸಕರು ಹೇಳಿದರು.

ಕೆಟ್ಟ ಗ್ರೂಪುಗಳಿದ ದೂರ ಇರಿ:
ವ್ಯಾಟ್ಸಪ್ ಗಳಲ್ಲಿ ಕೆಲವೊಂದು ದುಷ್ಟ ಹುಳಗಳು ಪಕ್ಷದ ನಾಯಕರ ಬಗ್ಗೆ ಕೆಟ್ಟದಾಗಿ ಬರೆಯುತ್ತಾರೆ. ಅಂಥ ಗ್ರೂಪುಗಳಿಂದ ಕಾರ್ಯಕರ್ತರು ಲೆಫ್ಡ್ ಆಗಬೇಕು. ಎರಡು ಮೂರು ಹುಳಗಳಿಂದ ಮಾತ್ರ ಈ ಕೃತ್ಯ ಆಗುತ್ತಿದೆ. ಹುಳಗಳು ಯಾರು ಎಂದೂ ಗೊತ್ತಿದೆ. ಕೆಟ್ಟ ಹುಳಗಳಿಗೆ ಮದ್ದು ಸಿಂಪಡನೆ ಮಾಡಲೂ ಗೊತ್ತಿದೆ. ಹುಳಗಳ ಕಾಟ ಅತಿಯಾದರೆ ಮದ್ದು ಬಿಡುವ ಕೆಲಸ ಮಾಡುತ್ತೇನೆ ಎಂದು ಶಾಸಕರು ಹೇಳಿದರು.

ಅಭಿವೃದ್ದಿಗೆ ಕೈ ಜೋಡಿಸಿ:
ಅಭಿವೃದ್ದಿಗೆ ಎಲ್ಲರೂ ಕೈ ಜೋಡಿಸಿ. ಕೆಟ್ಟ ಕೆಲಸಗಳಿಗೆ ಯಾರೂ ಹೋಗಬೇಡಿ. ಎಲ್ಲರೂ ಸೌಹಾರ್ಧತೆಯಿಂದ ಬದುಕುವ ವಾತಾವರಣಕ್ಕೆ ಬೆಂಬಲ ಕೊಡುವ ಕೆಲಸ ಕಾಂಗ್ರೆಸ್ ಕಾರ್ಯಕರ್ತರಿಂದ ಆಗಬೇಕು ಎಂದು ಹೇಳಿದರು.

 

ಕಾರ್ಯಕರ್ತರ ಮೂಲಕವೇ ಅನುದಾನ ಹಂಹಬ್ಬಚಿದ ಏಕೈಕ ಶಾಸಕ ಅಶೋಕ್ ರೈ :
ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಶಾಸಕ ಅಶೋಕ್ ರೈ ಅವರು ನಿರೀಕ್ಷೆಗೂ ಮೀರಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಏನು ಭರವಸೆ ಕೊಟ್ಡಿದ್ದಾರೋ ಅದೆಲ್ಲವನ್ನೂ ಎರಡು ವರ್ಷದಲ್ಲಿ ಈಡೇರಿಸಿದ್ದಾರೆ ಎಂಬುದು ನಮ್ಮೆಲ್ಲರ ಅಭಿಮಾನವಾಗಿದೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅತ್ಯಂತ ಮಹತ್ವವಾಗಿದೆ. ಶಾಸಕರು ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ಪ್ರಮುಖ ಪದಾಧಿಕಾರಿಗಳ ತನಕ ಎಲ್ಲರಿಗೂ ಗೌರವ ಕೊಡುವ ಕೆಲಸ ಮಾಡುತ್ತಿದ್ದಾರೆ. ಇಷ್ಟು ವರ್ಷ ಬೂತ್ ,ವಲಯ ಅಧ್ಯಕ್ಷರನ್ನು ಚುನಾವಣೆ ಸಮಯದಲ್ಲಿ ಮಾತ್ರ ಬಳಕೆಯಾಗುತ್ತಿದ್ದರು ಆದರೆ ಈಗ ಅದಕ್ಕಿಂತ ವ್ಯತಿರಿಕ್ತವಾಗಿ ಮಾಡಿ ಪಕ್ಷ ಸಂಘಟಿಸುವ ಕೆಲಸ ಮಾಡುತ್ತಿದ್ದಾರೆ. ಅನುದಾನವನ್ನು ಕೂಡಾ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯಕ್ಕೇ ಮಾದರಿ ಎಂಬಂತೆ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಆಯೋಜನೆ ಮಾಡುವ ಮೂಲಕ ಪಕ್ಷಕ್ಕೆ ಇನ್ನಷ್ಟು ಬಲಿಷ್ಠತೆಯನ್ನು ತಂದಿದ್ದಾರೆ. ಪುತ್ತೂರಿನಲ್ಲಿ ಕಾಂಗ್ರೆಸ್ ಭದ್ರವಾಗಿದೆ ಎಂದು ಹೇಳಿದರು.

 

ಬಡವರ ಅಂತ್ಯಕ್ರಿಯೆಗೆ ಪಕ್ಷದಿಂದ ಆರ್ಥಿಕ ನೆರವು:
ಕ್ಷೇತ್ರ ವ್ಯಾಪ್ತಿಯಲ್ಲಿ ಯಾರೇ ಆಗಲಿ ಬಡವರ ಕುಟುಂಬದಲ್ಲಿ ಮರಣ ಸಂಭವಿಸಿದ್ದಲ್ಲಿ ಅಂಥವರಿಗೆ ಅಂತ್ಯಕ್ರಿಯೆ ಮಾಡಲು ಆರ್ಥಿಕ ಸಂಕಷ್ಟ ಉಂಟಾದರೆ ಪಕ್ಷದ ವತಿಯಿಂದ ನೆರವು ನೀಡುವ ಯೋಜನೆಗೆ ಶಾಸಕರು ಚಾಲನೆ ನೀಡಿದರು.‌ಶಾಸಕರ ಸ್ವಂತ ನಿಧಿಯಿಂದ 1ಲಕ್ಷ ನೀಡುವುದಾಗಿ ಹೇಳಿದ ಶಾಸಕರು ಒಟ್ಟು 5 ಲಕ್ಷ ರೂ ಫಂಡ್ ಸಂಗ್ರಹಿಸುವಂತೆ ಶಾಸಕರು ಬ್ಲಾಕ್ ಗೆ ಸೂಚನೆ ನೀಡಿದರು. ಇದೇ ವೇಳೆ ಇಬ್ಬರು ಅಸಹಾಯಕ ರಿಗೆ ಆರ್ಥಿಕ ನೆರವು ನೀಡಲಾಯಿತು.


ವೇದಿಕೆಯಲ್ಲಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ,‌ಬ್ಲಾಕ್ ಅಲ್ಪ ಸಂಖ್ಯಾತ ಘಟಕದ‌ ಅಧ್ಯಕ್ಷ ಅಬ್ದುಲ್ ರಹಿಮಾನ್ ಅಝಾದ್, ಬ್ಲಾಕ್ ಕೋಶಾದಿಕಾರಿ ವಲೇರಿಯನ್ ಡಯಾಸ್ ,ಸೇವಾದಳ ಘಟಕದ ಜೋಕಿಂ ಡಿಸೋಜಾ, ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರ್,ತುಳು ಅಕಾಡೆಮಿ‌ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ,ಜವಾಹರಲಾಲ್ ಬಾಲ್ ಮಂಚ್ ಇದರ ಜಿಲ್ಲಾಧ್ಯಕ್ಷೆ ಶೈಲಜಾ ರಾಜೇಶ್ , ಉಪಸ್ಥಿತರಿದ್ದರು.ಬ್ಲಾಕ್ ಅಧ್ಯಕ್ಷ ಕೆ ಪಿ ಆಳ್ವ ಸ್ವಾಗತಿಸಿ,ಪ್ರ.ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ ಪ್ರಸ್ತಾವಿಕವಾಗಿ ಮಾತನಾಡಿದರು.ಸರ್ವೆ ವಲಯ ಅಧ್ಯಕ್ಷ ಕಮಲೇಶ್ ವಂದಿಸಿದರು.

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version