Published
8 months agoon
By
Akkare News
ಮಂಗಳೂರು : ಬಿರುವೆರ್ ಕುಡ್ಲ ಇದೀಗ ಅಶಕ್ತರ ಪಾಲಿನ ಬೆಳಕಾಗಿ ಭರವಸೆ ಮೂಡಿಸಿದ ಸಂಘಟನೆಯಾಗಿ ಬೆಳೆದಿದ್ದು ನಿಂತಿದೆ ಎಂದು ಚಿತ್ರನಟ ರೂಪೇಶ್ ಶೆಟ್ಟಿ ಬಿರುವೆರ್ ಕುಡ್ಲದ ಯುವಕರ ಸಾಧ ನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಬಳ್ಳಾಲ್ಬಾಗ್ ಶ್ರೀ ಭ ಗವತಿ ದೇವಸ್ಥಾನದಲ್ಲಿ ಶನಿವಾರ ಬಿರುವೆರ್ ಕುಡ್ಲ -ಕಾರುಣ್ಯಸೇತು ಫೌಂಡೇಷನ್ನಿಂದ ಅಶಕ್ತ ಕುಟುಂಬಗಳಿಗೆ ಚಿಕಿತ್ಸೆಗಾಗಿ ಆಯೋಜಿಸಲಾದ ಸ್ಪಂದನಾ ಆರ್ಥಿಕ ನೆರವು ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಉದಯಪೂಜಾರಿ ಬಳ್ಳಾಲ್ಬಾಗ್ ನೇತೃತ್ವದ ಸ್ನೇಹಿತರ ಬಳಗವು ಬಿರುವೆರ್ ಕುಡ್ಲ ಸಂಸ್ಥೆಯ ಸಮಾಜದಲ್ಲಿ ಶಕ್ತಿಯುತವಾಗಿ ಬೆಳೆದು ಆಶಕ್ತರಿಗೆ ಬಲತುಂಬುವ ಕೆಲಸ ಮಾಡುತ್ತಿದೆ ಇದೊಂದು ಸಮಾಜಕ್ಕೆ ದೊಡ್ಡ ಸೇವೆ.ಈ ತಂಡಕ್ಕೆ ಹೆಚ್ಚಿನ ಶಕ್ತಿಯನ್ನು ಜನರೂ ತುಂಬಬೇಕು ಎಂದರು. ಇದರೊಂದಿಗೆ ಸ್ವಸ್ಥಿಕ್ ಆರ್ಯ ಅವರು ಕಾರುಣ್ಯ ಸೇತು ಫೌಂಡೇಷನ್ ಮೂಲಕ ಜತೆಗೂಡಿ ಇದೀಗ ಬಡವರ್ಗದ ನೆರವಿಗೆ `ಧಾ ವಿಸಿರುವುದು ಶ್ಲಾಘನೀಯ ಎಂದರು.ಬಿಲ್ಲವ ಮುಂದಾಳು ಪದ್ಮರಾಜ್ ಅವರು ಮಾತನಾಡಿ, ಯುವ ಶಕ್ತಿಗಳು ಉತ್ತಮ ಸಮಾಜಕ್ಕಾಗಿ ಕೈಜೋಡಿಸಿದಾಗ ಎಂತಹ ಕೆಲಸವನ್ನಾದರೂ ಮಾಡಿತೋರಿಸಬಹುದು ಎಂಬುದಕ್ಕೆ ಉದಯಪೂಜಾರಿ ನೇತೃತ್ವದ ಬಿರುವೆರ್ ಕುಡ್ಲ ಉದಾಹರಣೆಯಾಗಿದೆ.