Published
7 months agoon
By
Akkare News
ಜಿ ಎಲ್ ಆಚಾರ್ಯ ಜ್ಯುವೆಲ್ಲರ್ಸನಲ್ಲಿ ಆಟದ ಕೂಟ ಜು.26ರಂದು ಮತ್ತೂರು ಶಾಖೆಯಲ್ಲಿ ನಡೆಯಿತು. ಆಟಿ ತಿಂಗಳು ಹಾಗೂ ನಾಗರಪಂಚಮಿ ಪ್ರಯುಕ್ತ ಜಿ ಎಲ್ ಗ್ರಾಹಕರಿಗೆ ಹಾಗೂ ಸಿಬ್ಬಂದಿಗಳಿಗೆ ವಿಶೇಷ ಆಟಿಯ ತಿಂಡಿ ತಿನಿಸುಗಳಾದ ಪತ್ತೋಡೆ, ಗೇನಸಾಲೆ ಹಾಗೂ ಕಷಾಯದ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಪುತ್ತೂರು: ತುಳುನಾಡಿನಲ್ಲಿ ಆಟಿ ತಿಂಗಳ ಆಗಮನದೊಂದಿಗೆ ಆಟಿದ ಗಮ್ಮತ್ ಆರಂಭವಾಗಿದೆ. ಈ ಸಂದರ್ಭದಲ್ಲಿ ಪಾಲೆದ ಕಷಾಯ ಸೇವನೆ ಮತ್ತು ಮನೆಮನೆಯಲ್ಲಿ ಪತ್ರೊಡೆ ಸವಿಯುವ ಸಂಪ್ರದಾಯ ಜನಪ್ರಿಯವಾಗಿದೆ.
ಆದರೆ, ಗ್ರಾಹಕರೊಂದಿಗೆ ಈ ಸಂಪ್ರದಾಯವನ್ನು ಆಚರಿಸುವ ಸಂಸ್ಥೆಗಳು ವಿರಳ. ಈ ನಿಟ್ಟಿನಲ್ಲಿ, ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ವಿನೂತನ ರೀತಿಯಲ್ಲಿ ಗಮನ ಸೆಳೆದಿದೆ.
ಜುಲೈ 26, 2025ರಂದು, ಆಟಿ ತಿಂಗಳ ಆಚರಣೆಯ ಪ್ರಯುಕ್ತ, ಜಿಎಲ್ ಆಚಾರ್ಯ ಜ್ಯುವೆಲ್ಲರ್ಸ್ ತನ್ನ ಗ್ರಾಹಕರಿಗೆ ಮತ್ತು ಸಿಬ್ಬಂದಿಗೆ ಪತ್ರೊಡೆ, ಗೇನಸಾಲೆ ಮತ್ತು ಪಾಲೆದ ಕಷಾಯವನ್ನು ಒದಗಿಸಿತು.