Published
3 months agoon
By
Akkare News
ಪುತ್ತೂರು: ಬಪ್ಪಳಿಗೆಯ ನಟ್ಟೋಜ ಫೌಂಡೇಶನ್ ಟ್ರಸ್ಟ್ (ರಿ.) ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ 25ನೇ ವರ್ಷದ ರಜತ ಮಹೋತ್ಸವದ ಪ್ರಯುಕ್ತ ಡಿಸೆಂಬರ್ 13ರಂದು ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ದಕ್ಷಿಣ ಭಾರತದ ಖ್ಯಾತ ಗಾಯಕರು ಹಾಗೂ ರಾಷ್ಟ್ರಪ್ರಶಸ್ತಿ ವಿಜೇತರೂ ಆದ ವಿದ್ವಾನ್ ಪಿ. ಉನ್ನಿಕೃಷ್ಣನ್ ಹಾಗೂ ಕು. ಉತ್ತರಾ ಉನ್ನಿಕೃಷ್ಣನ್ ಮತ್ತು ಅವರ ತಂಡದವರಿಂದ ಈ ಸಂಗೀತ ಕಚೇರಿ ನಡೆಯಲಿದೆ.