Published
3 months agoon
By
Akkare News
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧನುರ್ಮಾಸದ ವಿಶೇಷ ಪೂಜಾ ಕೈಂಕರ್ಯಗಳು ಇಂದಿನಿಂದ (ಡಿ.16) ಆರಂಭಗೊಂಡಿವೆ..
ಧನುಸಂಕ್ರಮಣದ ಮರುದಿನದಿಂದ ಪ್ರಾರಂಭವಾಗಿ, ಮುಂದಿನ ಉತ್ತರಾಯಣ ಪುಣ್ಯಕಾಲವಾದ ಮಕರ ಸಂಕ್ರಮಣದವರೆಗೆ ಈ ಪೂಜೆ ನಡೆಯಲಿದೆ
ಇದರ ಅಂಗವಾಗಿ ಇಂದು ಪ್ರಾತಃಕಾಲ 5:30ರ ಸುಮಾರಿಗೆ ದೇವರಿಗೆ ಧನುರ್ಮಾಸದ ಪ್ರಥಮ ಪೂಜೆಯನ್ನು ವಿಧಿವತ್ತಾಗಿ ನೆರವೇರಿಸಲಾಯಿತು.
ಕೊರೆಯುವ ಚಳಿಯ ನಡುವೆಯೂ ಈ ಸಂದರ್ಭದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.