ಕೋಡಿಂಬಾಡಿ: 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ; ನೂತನ ಪದಾಧಿಕಾರಿಗಳ ಆಯ್ಕೆ; ಗೌರವಾಧ್ಯಕ್ಷರಾಗಿ ವಾರಿಸೇನ್ ಜೈನ್ , ಅಧ್ಯಕ್ಷರಾಗಿ ಭರತ್ ಗೌಡ ನಿಡ್ಯ,ಕಾರ್ಯಾಧ್ಯಕ್ಷರಾಗಿ ಕೇಶವ ಭಂಡಾರಿ ಕೈಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ದೇವಾನಂದ ಕೆ.
ಪುತ್ತೂರು: ಕೋಡಿಂಬಾಡಿಯ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಜೂ.21ರಂದು ಧರ್ಮಶ್ರೀ ಭಜನಾ ಮಂದಿರದಲ್ಲಿ ನಡೆಯಿತು.
ನೂತನ ಗೌರವಾಧ್ಯಕ್ಷರಾಗಿ ವಾರಿಸೇನ ಜೈನ್ ಕೋಡಿಯಾಡಿಗುತ್ತು, ಅಧ್ಯಕ್ಷರಾಗಿ ಭರತ್ ಗೌಡ ನಿಡ್ಯ, ಕಾರ್ಯಾಧ್ಯಕ್ಷರಾಗಿ ಕೇಶವ ಭಂಡಾರಿ ಕೈಪ, ಪ್ರಧಾನ ಕಾರ್ಯದರ್ಶಿಯಾಗಿ ದೇವಾನಂದ ಕೆ, ಕಾರ್ಯದರ್ಶಿಯಾಗಿ ಕುಮಾರನಾಥ ಯಸ್. ಪಲ್ಲತ್ತಾರು, ಕೋಶಾಧಿಕಾರಿಯಾಗಿ ಚೆನ್ನಣ್ಣ ಗೌಡ ಬರಮೇಲು, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬದಿನಾರು, ಅಶೋಕ ಪ್ರಭು ದಾರಂದಕುಕ್ಕು, ದೀಕ್ಷಿತ್ ಯಂ.ಎಲ್., ಪ್ರಭಾಕರ ಸಾಮಾನಿ ಮಠಂತಬೆಟ್ಟು, ಉಮೇಶ್ ಗೌಡ ಪನಿತೋಟ, ಪ್ರದೀಪ್ ಕುಮಾರ್ ಶೆಟ್ಟಿ ಪನಿಪಾಲು, ಶಾರದಾ ಸಿ. ರೈ ಸರೋಳಿ, ಶೇಖರ ಪೂಜಾರಿ ನಿಡ್ಯ, ಬಾಬು ಗೌಡ ಭಂಡಾರದಮನೆ, ಗೌರವ ಸಲಹೆಗಾರರಾಗಿ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೆ. ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ಮುರಳೀಧರ ರೈ ಮಠಂತಬೆಟ್ಟು, ಜಯಾನಂದ ಕೋಡಿಂಬಾಡಿ, ರಮೇಶ್ ನಾಯಕ್ ನಿಡ್ಯ, ಉಲ್ಲಾಸ್ ಕೋಟ್ಯಾನ್ ಪಲ್ಲತ್ತಾರು, ಸುಭಾಸ್ ನಾಯಕ್ ನೆಕ್ಕರಾಜೆ ಮತ್ತು ನಿರಂಜನ ರೈ ಮಠಂತಬೆಟ್ಟು ಅವರನ್ನು ಆಯ್ಕೆ ಮಾಡಲಾಯಿತು. 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ಮೂರು ದಿನ ನಡೆಯುವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.