ಮಠಂತ ಬೆಟ್ಟುವಿನ, ಶ್ರೀ ಮಹಿಷಮರ್ದಿನಿ ದೇವಿಗೆ ಸಮರ್ಪಣೆಗೊಳ್ಳಲಿರುವ ಸ್ವರ್ಣ ಕವಚದ ಬಗ್ಗೆ ಶ್ರೀ ದೇವಿಯ ಭಕ್ತರ ವಿಶೇಷ ಸಭೆಯು,ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಅಶೋಕ್ ರೈ ಅವರ ಅಧ್ಯಕ್ಷತೆ ಯಲ್ಲಿ ಜನವರಿ 04 ರಂದು ರೈ ಎಸ್ಟೇಟ್ ಕೋಡಿಂಬಾಡಿ ಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಶ್ರೀ ನಿರಂಜನ್ ರೈ ಮತ್ತು ಸದ್ಯಸರುಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ದೇವಿಯ ಭಕ್ತರು ಉಪಸ್ಥಿತರಿದ್ದರು.
ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಂತೆ, ಸ್ವರ್ಣ ಕವಚದ ಮನವಿಯನ್ನು ನೂರಾರು ಭಕ್ತರಿಂದ ಗ್ರಾಮದ ಮನೆ ಮನೆ ಭೇಟಿ ನೀಡುವ ಕಾರ್ಯಕ್ರಮ, ಪ್ರತಿ ಆದಿತ್ಯವಾರದಂದು ನಡೆಯುತ್ತದೆ.